ಪೆರ್ನೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ.ಪೆರ್ನೆ ವಲಯದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನರಿಗೆ ಜೀವನ ಶೈಲಿಯ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಬೀದಿನಾಟಕವನ್ನು ಆಯೋಜನೆ ಮಾಡಿದ್ದು ಸಂಸ್ಕಾರ ಜೋಡು ಮಾರ್ಗ ಕಲಾವಿದರಿಂದ ಮಾನಸಿಕ ರೋಗ, ಮೊಬೈಲ್ ಬಳಕೆ,

ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ಅಪಾಯ, ಅರೋಗ್ಯ ವಿಷಯಗಳ ಬಗ್ಗೆ ರೂಪಕ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೆದಿಲ ಸೊಸೈಟಿ ಅಧ್ಯಕ್ಷರಾದ ಪದ್ಮನಾಭ ಭಟ್ ಪೆರ್ನಾಜೆ, ಸೊಸೈಟಿ ನಿರ್ದೇಶಕರುಗಳು, ಸೊಸೈಟಿ ಮೆನೇಜರ್, ಸಿಬ್ಬಂದಿಗಳು, ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.



