Mon. Oct 20th, 2025

Belthangady: ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಬೆಳ್ತಂಗಡಿ ಪ್ರಖಂಡದಿಂದ ಹರೀಶ್ ವಿ. ನೆರಿಯ ಅವರ ಮನೆಗೆ ಭೇಟಿ

ಬೆಳ್ತಂಗಡಿ:(ಅ.20) ಗಂಡಿಬಾಗಿಲು ನಿವಾಸಿ ಹರೀಶ್ ವಿ. ನೆರಿಯ ಅವರ ಮನೆಯಲ್ಲಿ ಅಕ್ಟೋಬರ್ 6 ರಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು, ಅವರ ಮನೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಬೆಳ್ತಂಗಡಿ ಪ್ರಖಂಡ ವತಿಯಿಂದ ಭೇಟಿ‌ ನೀಡಿ ಆರ್ಥಿಕ ಧನ ಸಹಾಯ ನೀಡಿದರು.

ಇದನ್ನೂ ಓದಿ: ⭕ಮಂಗಳೂರು: ಅಭಿಷೇಕ್‌ ಆಚಾರ್ಯ ಆತ್ಮಹತ್ಯೆ ಪ್ರಕರಣ


ಈ ಸಂದರ್ಭದಲ್ಲಿ ವಿ.ಹಿಂ.ಪ. ಪುತ್ತೂರು ಜಿಲ್ಲಾ ಗೋ ರಕ್ಷಾ ಪ್ರಮುಖ್ ಗಣೇಶ್ ಕಳೆಂಜ, ಬಜರಂಗದಳ‌ ಪುತ್ತೂರು ಜಿಲ್ಲಾ ಸಹ ಸಂಯೊಜಕ್ ದಿನೇಶ್ ಚಾರ್ಮಾಡಿ, ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ ಅದ್ಯಕ್ಷರು ವಿಷ್ಣು ಮರಾಠೆ,

ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್‌ ಧರ್ಮಸ್ಥಳ, ವಿ.ಹಿಂ.ಪ.ಬಜರಂಗದಳ‌ ಬೆಳ್ತಂಗಡಿ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ, ವಿ.ಹಿಂ.ಪ ಬಜರಂಗದಳ ಸತ್ಸಂಗ ಪ್ರಮುಖ್ ಅಶೋಕ್ ಕಳೆಂಜ, ರಾಘವೇಂದ್ರ ಉಂಕ್ರೊಟ್ಟು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *