ಉಜಿರೆ:(ನ.4) ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ( 14 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಖಾಯಿಲೆಗಳ ತಪಾಸಣೆ) ವು ನವೆಂಬರ್ 16 ರಂದು
ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ವರೆಗೆ ಎಸ್.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ , ಉಜಿರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಡಾ| ಪ್ರಥಿತ್ (MBBS , MD (PEAD) , ಡಾ| ಅರ್ಚನಾ ಕೆ.ಎಂ (MBBS , MD (PEAD) , ಡಾ| ನಿಖಿತಾ ಮಿರ್ಲೆ (MBBS , MD (PEAD) Fellowship in Pediatric Pulmonology), ಮಕ್ಕಳ ರೋಗ ತಜ್ಞರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುವುದು:
- ಅಸ್ತಮಾ
 - ಉಬ್ಬಸ
 - ಅತಿಸಾರ(ಅತಿಭೇದಿ)
 - ಮಲಬದ್ಧತೆ
 - ಜ್ವರ
 - ಅಲರ್ಜಿ
 - ರ್ಯಾಶಸ್( ದದ್ದುಗಳು)
 - ಚರ್ಮದ ಸೋಂಕು
 - ಕೆಮ್ಮು
 - ಕಫ
 - ಹೊಟ್ಟೆನೋವು
 - ಹಲ್ಲುನೋವು
 - ಕಟ್ಟಿಕೊಳ್ಳುವ ಮೂಗು
 - ವಾಕರಿಕೆ ಮತ್ತು ವಾಂತಿ
 - ಪೌಷ್ಠಿಕಾಂಶದ ಕೊರತೆ
 - ಮೂರ್ಛೆರೋಗ
 - ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ
 - ಜಾಂಡೀಸ್
 - ಥೈರಾಯ್ಡ್ ಅಸ್ವಸ್ಥತೆ
 - ಮೂತ್ರದ ಸೋಂಕು
 - ರಕ್ತಹೀನತೆ ಹಾಗೂ ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು.
 


ಶಿಬಿರದ ಪ್ರಯೋಜನಗಳು:
- ವೈದ್ಯರ ಸಮಾಲೋಚನೆ ಉಚಿತ
 - ಒಳರೋಗಿ ವಿಭಾಗದಲ್ಲಿ 10 % ರಿಯಾಯಿತಿ
 - ಔಷಧದಲ್ಲಿ 10% ರಿಯಾಯಿತಿ
 - ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ20% ರಿಯಾಯಿತಿ
 
ಹೆಸರು ನೋಂದಾಯಿಸಲು ಸಂಪರ್ಕಿಸಿ:
7760397878 / 8073349216


