ಉಜಿರೆ:(ನ.4) ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ( 14 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಖಾಯಿಲೆಗಳ ತಪಾಸಣೆ) ವು ನವೆಂಬರ್ 16 ರಂದು
ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ವರೆಗೆ ಎಸ್.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ , ಉಜಿರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಡಾ| ಪ್ರಥಿತ್ (MBBS , MD (PEAD) , ಡಾ| ಅರ್ಚನಾ ಕೆ.ಎಂ (MBBS , MD (PEAD) , ಡಾ| ನಿಖಿತಾ ಮಿರ್ಲೆ (MBBS , MD (PEAD) Fellowship in Pediatric Pulmonology), ಮಕ್ಕಳ ರೋಗ ತಜ್ಞರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುವುದು:
- ಅಸ್ತಮಾ
- ಉಬ್ಬಸ
- ಅತಿಸಾರ(ಅತಿಭೇದಿ)
- ಮಲಬದ್ಧತೆ
- ಜ್ವರ
- ಅಲರ್ಜಿ
- ರ್ಯಾಶಸ್( ದದ್ದುಗಳು)
- ಚರ್ಮದ ಸೋಂಕು
- ಕೆಮ್ಮು
- ಕಫ
- ಹೊಟ್ಟೆನೋವು
- ಹಲ್ಲುನೋವು
- ಕಟ್ಟಿಕೊಳ್ಳುವ ಮೂಗು
- ವಾಕರಿಕೆ ಮತ್ತು ವಾಂತಿ
- ಪೌಷ್ಠಿಕಾಂಶದ ಕೊರತೆ
- ಮೂರ್ಛೆರೋಗ
- ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ
- ಜಾಂಡೀಸ್
- ಥೈರಾಯ್ಡ್ ಅಸ್ವಸ್ಥತೆ
- ಮೂತ್ರದ ಸೋಂಕು
- ರಕ್ತಹೀನತೆ ಹಾಗೂ ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು.


ಶಿಬಿರದ ಪ್ರಯೋಜನಗಳು:
- ವೈದ್ಯರ ಸಮಾಲೋಚನೆ ಉಚಿತ
- ಒಳರೋಗಿ ವಿಭಾಗದಲ್ಲಿ 10 % ರಿಯಾಯಿತಿ
- ಔಷಧದಲ್ಲಿ 10% ರಿಯಾಯಿತಿ
- ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ20% ರಿಯಾಯಿತಿ
ಹೆಸರು ನೋಂದಾಯಿಸಲು ಸಂಪರ್ಕಿಸಿ:
7760397878 / 8073349216


