Fri. Nov 7th, 2025

Kasaragod: ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಸ್ಕೂಟರ್ – ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಸ್ಕೂಟರ್ ಬಡಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕುಂಬಳೆ ಪೂಕಟ್ಟೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಝಾಕ್ -ರಂಶೀನಾ ದಂಪತಿಯ ಪುತ್ರಿ ರಿಸ್ವಾನ (15)ಮೃತ ಪಟ್ಟವಳು.

ಇದನ್ನೂ ಓದಿ: ⭕ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಶಾಂಭವಿ ನದಿ ಕಿನಾರೆಯಲ್ಲಿ ಪತ್ತೆ

ರಿಸ್ವಾನಾ ಮತ್ತು ಗೆಳತಿ ಸ್ಕೂಟರಿನಲ್ಲಿ ಟ್ಯೂಷನ್ ಗೆ ಹೋಗುವಾಗ ದುರಂತ ಉಂಟಾಯಿತು. ಅಪಘಾತದ ಬೆನ್ನಲ್ಲೇ ಇಬ್ಬರನ್ನೂ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಯಿತು.

ಗಂಭೀರ ಗಾಯಗೊಂಡ ರಿಸ್ವಾನ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *