ಹಾವೇರಿ (ನ.08): ಪ್ರೀತಿ-ಪ್ರೇಮ ಅಂತ 4 ವರ್ಷ ಯುವತಿ ಜೊತೆ ಊರು-ಊರು ಸುತ್ತಿ, ಬಳಿಕ ಗರ್ಭಿಣಿ ಮಾಡಿ ಕೈಕೊಟ್ಟಿದ್ದಾನಂತೆ.

ಇದನ್ನೂ ಓದಿ: ⭕Anekal: ಮೂವರು ಮಕ್ಕಳ ತಾಯಿಯ ಸಲಿಂಗ ಕಾಮದಾಹಕ್ಕೆ 5 ತಿಂಗಳ ಶಿಶು ಬಲಿ
ಯುವಕ ಮದುವೆಗೆ ನಿರಾಕರಿಸಿದ ಎಂದು ಮನನೊಂದ 3 ತಿಂಗಳ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಹಾವೇರಿ ಶಂಕರಿಪುರ ಗ್ರಾಮದಲ್ಲಿ ನಡೆದಿದೆ. ಯುವತಿ ಸಾವಿಗೆ ಪೋಷಕರು ಆಕ್ರೋಶ ಹೊರಹಾಕಿದ್ದು, ಯುವಕನ ಮನೆಯೆದುರು ಶವವಿಟ್ಟು ಪ್ರತಿಭಟನೆ ಮಾಡ್ತಿದ್ದಾರೆ.

ಗರ್ಭಿಣಿ ಮಾಡಿ ಕೈಕೊಟ್ಟ ಯುವಕ
ಹಾವೇರಿಯ ಶಂಕರಿಪುರ ಗ್ರಾಮದ 24 ವರ್ಷದ ಸಿಂಧೂ ಪರಮೇಶಪ್ಪ ಎಂಬ ಯುವತಿ 4 ವರ್ಷಗಳಿಂದ ಶರತ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಪ್ರೀತಿ-ಪ್ರೇಮ ಅಂತ ಆಕೆಯ ಜೊತೆ ಓಡಾಡ್ತಿದ್ದ ಶರತ್, ಸಿಂಧು ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗ್ತಿದೆ. ಸಿಂಧೂ ಗರ್ಭಿಣಿ ಎನ್ನುವ ವಿಚಾರ ತಿಳಿದು ವರಸೆ ಬದಲಿದ್ದಾನಂತೆ.
ಕುಟುಂಬಸ್ಥರೇ ಕೇಳಿದ್ರೂ ಒಪ್ಪದ ಯುವಕ
ಸಿಂಧೂ ಗರ್ಭಿಣಿಯಾದ ಬಳಿಕ ಈತ ಮದುವೆಯಾಗಲ್ಲ ಎಂದಿದ್ದನಂತೆ. ಈ ವಿಚಾರ ಸಿಂಧೂ ಕುಟುಂಬಸ್ಥರಿಗೂ ಗೊತ್ತಾಗಿದೆ. ಬಳಿಕ ರಾಜಿ-ಸಂಧಾನ ಮಾಡಿದ್ದಾರೆ. ಮಗಳನ್ನ ಮದುವೆಯಾಗುವಂತೆ ಕೇಳಿದ್ರು ಆತ ಒಪ್ಪಲಿಲ್ಲ ಎನ್ನಲಾಗ್ತಿದೆ.


‘ಮಲಗೋ ಮುನ್ನ ಯೋಚಿಸಬೇಕಿತ್ತು’
ಗರ್ಭಿಣಿಯಾದ ಸಿಂಧೂ, ತನ್ನನ್ನು ಮದುವೆಯಾಗುವಂತೆ ಶರತ್ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಇಬ್ಬರ ಮೆಸೇಜ್ಗಳು ರಿವೀಲ್ ಆಗಿದೆ. ಆದ್ರೆ ಈತ, ನೀನು ಮಲಗೋ ಮುಂಚೆ ಯೋಚನೆ ಮಾಡಬೇಕಿತ್ತು ಎಂದೆಲ್ಲಾ ಮೆಸೇಜ್ ಮಾಡಿದ್ದಾನೆ ಎನ್ನಲಾಗ್ತಿದೆ.ನೇಣು ಬಿಗಿದುಕೊಂಡು ಯುವತಿ ಸೂಸೈಡ್
ನನ್ನ ಲೈಫ್ ನಿನ್ನ ಕೈಯಲ್ಲಿದೆ. ನಿತ್ಯ ಕಣ್ಣೀರು ಹಾಕ್ತಿದ್ದೀನಿ ಎಂದು ಸಿಂಧೂ ಟೆಕ್ಸ್ಟ್ ಮಾಡಿದ್ದಾಳೆ. ಇದಕ್ಕೆ ಶರಣ್ ಪ್ರೀತಿ ಮಾಡಬೇಕಾದ್ರೆ ಯೋಚನೆ ಮಾಡಬೇಕಿತ್ತು ಎಂದು ಹೇಳಿ ಅಸಡ್ಡೆ ತೋರಿದ್ದ ಎಂದು ತಿಳಿದು ಬಂದಿದೆ. ಯುವಕ ಮದುವೆಗೆ ನಿರಾಕರಿಸಿದ ಬಳಿಕ ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಯುವತಿ ಸಿಂಧೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.


