Wed. Jan 14th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ಕಾಶಿಪಟ್ಣ: ಬಡ ಕುಟುಂಬಗಳಿಗೆ ಮಹೇಂದ್ರ ಕಾಶಿಪಟ್ಣ ಅವರ ನೇತೃತ್ವದ “ತುಳುನಾಡ ಸಂಜೀವಿನಿ” ಸಂಸ್ಥೆ ಆಸರೆ – ಮೂರು ಬಡ ಕುಟುಂಬಗಳಿಗೆ ಒಂದು ವರ್ಷಕ್ಕೆ ಬೇಕಾದ ದಿನಸಿ ವಿತರಣೆ

ಕಾಶಿಪಟ್ಣ:(ನ.30) ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿರುವ ತುಳುನಾಡ ಸಂಜೀವಿನಿ ಸಂಸ್ಥೆಯು ಕಾಶಿಪಟ್ಣದ ಬಡ ಕುಟುಂಬಗಳ ಪಾಲಿಗೆ ನಿಜವಾದ ಸಂಜೀವಿನಿಯಾಗಿದೆ. ಕಾಶಿಪಟ್ಣದ ಪಲಾರು ನಿವಾಸಿ ದೇಜಪ್ಪ ಅವರ ಕುಟುಂಬವು ಅನಿವಾರ್ಯ ಕಾರಣಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಕುಟುಂಬಕ್ಕೆ ಆಧಾರವಾಗಬೇಕಾದವರೇ ದುಡಿಯಲು ಆಗದಂತಹ ಪರಿಸ್ಥಿತಿ ಎದುರಾಗಿತ್ತು.

ಈ ಕಷ್ಟಕರ ಪರಿಸ್ಥಿತಿಯನ್ನು ಅರಿತ ಮಹೇಂದ್ರ ಕಾಶಿಪಟ್ಣ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ತುಳುನಾಡ ಸಂಜೀವಿನಿ’ ಸಂಸ್ಥೆಯು ಆ ಕುಟುಂಬದ ನೆರವಿಗೆ ಧಾವಿಸಿದೆ.

ಒಂದು ವರ್ಷಕ್ಕೆ ಬೇಕಾದ ದಿನಸಿ ಸಾಮಗ್ರಿ ವಿತರಣೆ:


ದೇಜಪ್ಪ ಅವರ ಕುಟುಂಬದ ಕಷ್ಟವನ್ನು ಮನಗಂಡು, ಸಂಸ್ಥೆಯು ಅವರಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ದೈನಂದಿನ ದಿನಸಿ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ದೊಡ್ಡ ಮಾನವೀಯ ನೆರವು ನೀಡಿದೆ. ಇದರಿಂದಾಗಿ ಆ ಕುಟುಂಬವು ಒಂದು ವರ್ಷದವರೆಗೆ ಜೀವನ ನಿರ್ವಹಣೆಯ ಬಗ್ಗೆ ಚಿಂತಿಸದೆ, ಇತರ ಸೌಲಭ್ಯಗಳ ಮೇಲೆ ಗಮನಹರಿಸಲು ಸಹಾಯವಾಗಿದೆ.

ಮತ್ತೆ ಎರಡು ಕುಟುಂಬಗಳಿಗೆ ಮಾನವೀಯ ನೆರವು:


ಇದೇ ಸಂದರ್ಭದಲ್ಲಿ, ಸಂಸ್ಥೆಯು ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗದೆ, ಮತ್ತೆ ಎರಡು ಬಡ ಕುಟುಂಬಗಳ ಸಂಕಷ್ಟಗಳನ್ನು ಆಲಿಸಿ, ಅವರಿಗೂ ಕೂಡ ದೈನಂದಿನ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದೆ.

ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಶಾಲಾ ಸಾಮಗ್ರಿ ವಿತರಣೆ:


ದಿನಸಿ ಸಾಮಗ್ರಿಗಳ ವಿತರಣೆಯ ಜೊತೆಗೆ, ಈ ಸಂದರ್ಭದಲ್ಲಿ ಶಾಲೆಗೆ ಬೇಕಾಗುವಂತಹ ಸಾಮಾಗ್ರಿಗಳನ್ನು ಸಹ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು