ಬೆಳ್ತಂಗಡಿ: ಜನವಸತಿ ಇಲ್ಲದ ಜಾಗದ ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ವಾಮದಪದವಿನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಚಿಕ್ಕಮಗಳೂರು: ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಮಂಗಳೂರು ತಾಲೂಕಿನ ಉಳ್ಳಾಲ ಕಾಪಿಕಾಡ್ ನಿವಾಸಿ ಮನ್ವಿತ್ ಅವರು ತನ್ನ ತಂದೆಯ ಈ ಖಾಲಿ ನಿವೇಶನದ ಅಳತೆ ಮಾಡುವ ಉದ್ದೇಶದಿಂದ ಕಾರ್ಮಿಕರ ಮೂಲಕ ಪೊದೆ,
ಹುಲ್ಲನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಾವಿಯ ಒಳಗೆ ಮೃತದೇಹ ಕಂಡು ಬಂದಿದೆ. ಅಪರಿಚಿತ ವ್ಯಕ್ತಿಯು ಸುಮಾರು 50-60 ವರ್ಷ ಪ್ರಾಯದವನಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.





