Sat. Dec 6th, 2025

Ujire: ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ ಕಾರ್ಯಾಗಾರ

ಉಜಿರೆ: (ಡಿ.6) ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಿ.6 ರಂದು ಕಿಂಡರ್ಗಾರ್ಟನ್, ಒಂದನೇ ಹಾಗೂ ಎರಡನೇ ತರಗತಿ ಶಿಕ್ಷಕಿಯರಿಗೆ “ಬಾಲ್ಯದ ಆರೈಕೆ, ಶಿಕ್ಷಣ ಮತ್ತು ಸಕ್ರಿಯ ಕಲಿಕೆ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: 🔵ಕಟಪಾಡಿ: ವಿದ್ಯಾವರ್ಧಕ ಸಂಘದ ವತಿಯಿಂದ ನಿವೃತ್ತ ಉಪನ್ಯಾಸಕ ಭಾಸ್ಕರ ಕಾಮತ್ ರವರಿಗೆ ಗೌರವಾರ್ಪಣೆ

ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಪ್ರಗತಿ ಇಂಟರ್ನಾಷನಲ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ಸಿವ ಕುಮಾರ್ ಎನ್. ವಿ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಂಗಳೂರಿನ ಆಕ್ಸ್ಫರ್ಡ್ ವಲಯ ವ್ಯವಸ್ಥಾಪಕರು ಶ್ರೀ ಸುಜಿತ್ ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸ್ಮೃತಿ ಜೈನ್ ನಿರೂಪಿಸಿದರು.

Leave a Reply

Your email address will not be published. Required fields are marked *