Sun. Feb 23rd, 2025

Dhananjay : ಮದುವೆಗೆ ಎಲ್ಲರನ್ನೂ ಕರೆದು ದರ್ಶನ್‌ ನನ್ನೇ ಕರೆಯದ ಡಾಲಿ ಧನಂಜಯ್ !! – ಪ್ರೆಸ್ ಮೀಟ್ ನಲ್ಲಿ ಬಿಚ್ಚಿಟ್ರು ಅಸಲಿ ಕಾರಣ!!?

Dhananjay :(ಫೆ.8) ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಹೀಗಾಗಿ ಕನ್ನಡದ ಎಲ್ಲ ನಟ-ನಟಿಯರಿಗೆ, ಹಿರಿಯರಿಗೆ ಮನೆ ಮನೆಗೆ ತೆರಳಿ ಮದುವೆಯ ಆಮಂತ್ರಣವನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನವಗ್ರಹ ಸಿನಿಮಾದ “ಶೆಟ್ಟಿ” ಖ್ಯಾತಿಯ ನಟ ಗಿರಿ ದಿನೇಶ್​ ನಿಧನ

ಆದರೆ ಅಚ್ಚರಿ ಎಂಬಂತೆ ಧನಂಜಯ್ ಅವರು ದರ್ಶನ್ ಅವರಿಗೆ ಆಮಂತ್ರಣವನ್ನೇ ನೀಡಿಲ್ಲ. ಇದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರೆ ಇನ್ನು ಕೆಲವರಿಗೆ ಬೇಸರ ಉಂಟುಮಾಡಿದೆ. ಸದ್ಯ ಇದೀಗ ಡಾಲಿ ಧನಂಜಯ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಡಾಲಿ ಧನಂಜಯ್ ಎಲ್ಲರನ್ನೂ ಮದುವೆಗೆ ಕರೆದಿದ್ದಾರೆ. ದರ್ಶನ್‌ ಅವರನ್ನು ಯಾಕೆ ಕರೆದಿಲ್ಲ ಅನ್ನೋದೇ ಈಗ ಪ್ರಶ್ನೆ ಆಗಿದೆ. ಅದಕ್ಕೆ ಕಾರಣ ಏನೂ ಅನ್ನೋದನ್ನು ಸಧ್ಯ ಧನಂಜಯ್ ಅವರು ಹೇಳಿಕೊಂಡಿದ್ದಾರೆ.

ಪ್ರೆಸ್ ಮೀಟ್ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದರು. ” ದರ್ಶನ್ ಅವರನ್ನ ರೀಚ್ ಅಗೋಕೆ ಆಗ್ಲೇ ಇಲ್ಲ. ಅವರಿಗೂ ಮದುವೆ ಆಮಂತ್ರಣ ಕೊಡಬೇಕು ಅಂತ ಇತ್ತು. ಆದರೆ, ಅದು ಸಾಧ್ಯವಾಗ್ಲಿಲ್ಲ. ಹಾಗಾಗಿಯೇ ಈ ವೇದಿಕೆ ಮೂಲಕ ಅವರನ್ನ ಆಹ್ವಾನಿಸುತ್ತೇನೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *