ಪುದುವೆಟ್ಟು:(ಮೇ.14) ಪುದುವೆಟ್ಟು ಪಂಚಾಯತ್ 1ನೇವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ. 14 ರಂದು ಪುದುವೆಟ್ಟು ನಿವಾಸಿ, ಶ್ರೀಮತಿ ಸಿಂಧೂ ಕೆ ಎಸ್ ರವರು ಚುನಾವಣಾಧಿಕಾರಿ ಶ್ರೀ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವಿ ಎಂ ಬಿ ಸಹಕರಿಸಿದರು.

ಈ ಸಂದರ್ಭದಲ್ಲಿ ಪುದುವೆಟ್ಟು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕೆ ಸಿ, ಪಂಚಾಯತ್ ರಾಜ್ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ರಾಯ್ ಜೋಸೆಫ್, ಭೂ ನ್ಯಾಯ ಮಂಡಳಿ ಸದಸ್ಯರಾದ ಬೊಮ್ಮಣ್ಣ ಗೌಡ ಮಠ, ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಅಬ್ದುಲ್ ಗಪೂರ್, ವಾರ್ಡಿನ ಉಪಾಧ್ಯಕ್ಷರಾದ ಸಿಪಿ ಉಮ್ಮರ್ ,
ಗ್ರಾಮ ಸಮಿತಿ ಉಪಾಧ್ಯಕ್ಷರಾದ ಅಪ್ಪಚ್ಚನ್, ಸದಸ್ಯರಾದ ಸುರೇಶ್ ದರ್ಖಾಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕಲ, ಗೋಪಾಲ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.





