Madenuru Manu: ಅತ್ಯಾಚಾರ ಕೇಸ್ನಲ್ಲಿ ಮಡೆನೂರು ಮನು ಅವರು ಜೈಲು ಸೇರಿದ್ದರು. ಈಗ ಅವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಕನ್ನಡದ ಖ್ಯಾತ ನಾಯಕರಿಗೆ ಅವರು ಅಗೌರವ ತೋರಿ ಮಾತನಾಡಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿತ್ತು.


ಇದನ್ನೂ ಓದಿ: ⭕ಲಕ್ನೋ: 3 ವರ್ಷದ ಮಗುವಿನ ಮೇಲೆ ಬಲಾತ್ಕಾರ
ಈ ಬಗ್ಗೆ ಮನು ಮಾತನಾಡಿದ್ದಾರೆ. ‘ಆಡಿಯೋ ಮೂಲಕ ನನ್ನ ನಾಶ ಮಾಡಿದರು. ಆದರೆ, ಆ ಆಡಿಯೋ ನನ್ನದಲ್ಲ. ಹಲವು ವರ್ಷಗಳ ಕಾಲ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೇನೆ.


ನನ್ನ ಕನಸು ಈಡೇರುವಾಗ ಈ ರೀತಿ ಆಯ್ತು. ಈ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು. ಈ ರೀತಿ ಮಾಡಿದ ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಮಡೆನೂರು ಮನು ಹೇಳಿದ್ದಾರೆ.

