ಬೆಳ್ತಂಗಡಿ:(ಜೂ.16) ಬೆಳ್ತಂಗಡಿ ತಾಲೂಕಿನ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ತಂಡದ ವತಿಯಿಂದ ಇತ್ತೀಚೆಗೆ ಸ್ವರ್ಗಸ್ತರಾದ ಮುಂಡಾಜೆಯ ಸಕಲಕಲಾ ವಲ್ಲಭ ಶ್ರೀಯುತ ಜಯರಾಮ್ ಕೆ ನಾಯರ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಲಾಯಿತು.


ಇದನ್ನೂ ಓದಿ: ⭕ನೆಲ್ಯಾಡಿ: ನಿಂತಿದ್ದ ಹಿಟಾಚಿ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್
ಅದೇ ರೀತಿ ಅಹಮ್ಮದ್ ಬಾದ್ ವಿಮಾನ ದುರಂತದಲ್ಲಿ ಮಡಿದ ಜನರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷರಾದ ಗುಣಪಾಲ್ ಎಂ. ಎಸ್, ಸಂಚಾಲಕರು, ಪ್ರವೀಣ್ ಉಜಿರೆ ಹಾಗೂ ತಂಡದ ಸದಸ್ಯರು ಹಾಜರಿದ್ದರು.



