ಮುಂಡಾಜೆ:(ಜೂ.16) ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಗ್ರಾಮೀಣ ಪ್ರದೇಶವಾಗಿದ್ದು 1969ರಲ್ಲಿ ದಿವಂಗತ ಜಿ.ಎನ್.ಭಿಡೆ ಯವರು ಇಲ್ಲಿ ಹೈಸ್ಕೂಲ್ ಸ್ಥಾಪಿಸಿದರು. ಮುಂದೆ 1991ರಲ್ಲಿ ಜೂನಿಯರ್ ಕಾಲೇಜು, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯನ್ನೂ (lkg ಯಿಂದ 10ನೇ ತರಗತಿ )ಸ್ಥಾಪಿಸಿದರು. ಭಿಡೆ ಯವರ ನಂತರ ಶ್ರೀಧರ, ಜಿ. ಭಿಡೆ ಯವರು ಈ ಸಂಸ್ಥೆಯ ಸಾರಥ್ಯವನ್ನು ವಹಿಸಿ ಮುನ್ನಡೆಸಿದರು.

ಇದನ್ನೂ ಓದಿ: ☘Ujire: ಉಜಿರೆಯ ಪರಿಶ್ರಮ ಕೋಚಿಂಗ್ ಸೆಂಟರ್ ನಲ್ಲಿ 2025 -26 ನೇ ಸಾಲಿನ ತರಗತಿಗಳು ಆರಂಭ
2018ರಿಂದ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ)ನ ಸುಪರ್ದಿಯಲ್ಲಿ ಈ ಎಲ್ಲ ಸಂಸ್ಥೆಗಳು ನಡೆಯುತ್ತಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ 260 ಕ್ಕೂ ಮೀರಿ ವಿದ್ಯಾರ್ಥಿಗಳಿದ್ದು ಒಟ್ಟು ಸಂಖ್ಯೆ 900ನ್ನು ದಾಟಿದೆ.
ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲಾ ಕಟ್ಟಡ ಶಿಥಿಲ ವಾಗಿದ್ದು, ಈ ಕಟ್ಟಡವನ್ನು ವೀಕ್ಷಿಸಿದ್ದ ಅಂದಿನ ರೋಟರಿ ಕ್ಲಬ್ (2023 /2024) ಅಧ್ಯಕ್ಷರಾದ ರೊ. ಅನಂತ ಭಟ್ ಮಚ್ಚಿಮಲೆ ಯವರು ಒಂದು ವರುಷದ ಅವಧಿಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲಿಗೆ ನೂತನ ಕಟ್ಟಡವನ್ನು ಕಟ್ಟುವ ಕನಸು ಕಂಡರು. 20/10/2023ರಂದು ರೊ. ಹೆಚ್.ಆರ್.ಕೇಶವ, ಅಂದಿನ ಡಿ.ಜಿ.ರೋಟರಿ ಜಿಲ್ಲೆ- 3181 ಶಿಲಾನ್ಯಾಸ ನೆರವೇರಿಸಿದ್ದರು.
ರೋಟರಿ ಕ್ಲಬ್ ಬೆಳ್ತಂಗಡಿಯ ಸಾರಥ್ಯದಲ್ಲಿ ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ, ಕ್ಯಾನ್ ಫಿನ್ ಹೋಮ್ಸ್ ಲಿ. ಬೆಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮತ್ತಿತರ ದಾನಿಗಳ ನೆರವಿನಿಂದ18000 ಚದರ ಅಡಿಯಲ್ಲಿ ತರಗತಿ ಕೊಠಡಿ,ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಸುಮಾರು 2.25ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂಧೂರ” ದಿನಾಂಕ 20/6/2025ನೇ, ಶುಕ್ರವಾರ ಲೋಕಾರ್ಪಣೆ ಗೊಳ್ಳಲಿದೆ. ಈ ಸುಂದರ ಕಟ್ಟಡದ ನಿರ್ಮಾಣದಲ್ಲಿ ರೋಟರಿ ಅಧ್ಯಕ್ಷ ಅನಂತ ಭಟ್ ಮಚ್ಚಿ ಮಲೆ ಮತ್ತು ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಮಹತ್ವದ ಪಾತ್ರ ವಹಿಸಿರುತ್ತಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಸಿಂಧೂರ ಕಟ್ಟಡದ ಉದ್ಘಾಟನೆಯನ್ನು ರೊ. ವಿಕ್ರಂ ದತ್ತ, ಜಿಲ್ಲಾ ಗವರ್ನರ್ , ರೋಟರಿ ಜಿಲ್ಲೆ-3181 ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು, ಲೋಕಸಭಾ ಸದಸ್ಯರಾದ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ, ಶ್ರೀ ಕೆ. ಪ್ರತಾಪಸಿಂಹ ನಾಯಕ್, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಗಣೇಶ ಬಂಗೇರ, ಶ್ರೀ ಪ್ರಶಾಂತ್ ಜೋಶಿ, ಕ್ಯಾನ್ ಫಿನ್ ಹೋಮ್ಸ್ ಲಿ., ಬೆಂಗಳೂರು ಆಗಮಿಸಲಿದ್ದಾರೆ. ಕ್ಯಾನ್ ಫಿನ್ ಹೋಮ್ಸ್,ಬೆಂಗಳೂರು ಇವರು
ರೂ 12ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯವನ್ನು ನಿರ್ಮಿಸಲು ಧನ ಸಹಾಯ ಮಾಡಿದ್ದಾರೆ.
ವಿಶೇಷ ಅತಿಥಿಗಳಾಗಿ ಶಶಿಧರ ಶೆಟ್ಟಿ, ಬರೋಡ, ಉದ್ಯಮಿಗಳು, ನವಶಕ್ತಿ ಗುರುವಾಯನಕೆರೆ, ಶ್ರೀ ಕೆ ಮೋಹನ್ ಕುಮಾರ್. ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆ, ಶ್ರೀಧರ ಜಿ.ಭಿಡೆ ಅಧ್ಯಕ್ಷರು ಶತಾಬಿ ವಿದ್ಯಾಲಯ ಸಮಿತಿ ಮುಂಡಾಜೆ, ಶ್ರೀ ವೆಂಕಟೇಶ ತುಳುವುಳ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ, ರೊ. ಹೆಚ್.ಆರ್ ಕೇಶವ, ನಿಕಟಪೂರ್ವ ಜಿಲ್ಲಾ ಗವರ್ನರ್ ರೊ, ಸುಪ್ರಿಯ ಕಂದಾರಿ, ಅಧ್ಯಕ್ಷರು ಬೆಂಗಳೂರು ರೋಟರಿ ಕ್ಲಬ್, ರೊ.ಪೂರನ್ ವರ್ಮ, ಅಧ್ಯಕ್ಷರು ಬೆಳ್ತಂಗಡಿ ರೋಟರಿ ಕ್ಲಬ್,ಮತ್ತು ರೊ. ಅನಂತ ಭಟ್ ಮಚ್ಚಿಮಲೆ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತ ಗಣ್ಯರಾಗಿ ರೊ. ರಾಮಕೃಷ್ಣ DGN ರೋಟರಿ ಜಿಲ್ಲೆ -3181, ರೊ ಸತೀಶ್ ಬೋಳಾರ್ DGN ರೋಟರಿ ಜಿಲ್ಲೆ 3181,ರೊ. ಯಶಸ್ವಿ ಸೋಮಶೇಖರ್ DGND, ರೋಟರಿ ಜಿಲ್ಲೆ -3181 ರೊ. ಮಹಮ್ಮದ್ ವಳವೂರು ಸಹಾಯಕ ಗವರ್ನರ್ ರೋಟರಿ ಜಿಲ್ಲೆ- 3181, ರೊ. ಮನೋರಮ ಭಟ್ ವಲಯ ಸೇನಾನಿ, ರೋಟರಿ ಜಿಲ್ಲೆ, 3181, ರೊ.ರಿತೇಶ್ ಬಾಳಿಗೆ ಜಿಲ್ಲಾ ಕಾರ್ಯದರ್ಶಿ ರೋಟರಿ ಜಿಲ್ಲೆ- 3181 ರೊ. ಜಗದೀಶ್ ಮುಗುಳಿ, ಆಡಳಿತ ನಿರ್ದೇಶಕರು ಜಿ.ಐ ಆಟೋ ಪ್ರೈವೇಟ್ ಲಿಮಿಟೆಡ್. ಶ್ರೀ ಕೇಶವ ಪ್ರಸಾದ್ ಎಸ್ ಮದಂಗಲ್ಲು, ರೊ. ಪ್ರಕಾಶ ನಾರಾಯಣ ಅಧ್ಯಕ್ಷರು, ಮುಂಡಾಜೆ ಪ್ಯಾಕ್ಸ್, ಶ್ರೀ ಕಿರಣ ಚಂದ್ರ. ಡಿ. ಪುಷ್ಪಗಿರಿ. ಯುವ ಉದ್ಯಮಿಗಳು, ರೊ. ಡಾ ಎ.ಜಯಕುಮಾರ್ ಶೆಟ್ಟಿ, ನಿಯೋಜಿತ ಸಹಾಯಕ ಗವರ್ನರ್, ರೋಟರಿ ಜಿಲ್ಲೆ -3181 ರೊ. ಪ್ರಕಾಶ್ ಪ್ರಭು,ನಿಯೋಜಿತ ಅಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ,ರೊ. ಶರತ್ ಕೃಷ್ಣ ಪಡ್ಡೆ ಟ್ನಾಯ, ಆಡಳಿತ ಮೊಕೇಸರರು, ಶ್ರೀ ಜನಾರ್ಧನ ದೇವಸ್ಥಾನ ಉಜಿರೆ.ಶ್ರೀ ವಾಮನ ಪೈ ಉದ್ಯಮಿಗಳು, ಪುತ್ತೂರು. ರೊ. ಶ್ರೀಕಾಂತ ಕಾಮತ್, ಅಧ್ಯಕ್ಷರು, ರೋಟರಿ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಬೆಳ್ತಂಗಡಿ, ಇವರನ್ನು ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ, ಡಾ. ಕೃಷ್ಣ ಭಟ್ ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ರೊ.ಸಂದೇಶ ರಾವ್, ಕಾರ್ಯದರ್ಶಿ ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ವಿನಯ ಚಂದ್ರ, ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ, ಮುಂಡಾಜೆ. ರೊ.ವಿದ್ಯಾ ಕುಮಾರ್ ಕಾಂಚೋಡು, ನಿಕಟಪೂರ್ವ ಕಾರ್ಯದರ್ಶಿ, ರೋಟರಿ ಕ್ಲಬ್ ಬೆಳ್ತಂಗಡಿ. ಶ್ರೀ ನಾರಾಯಣ ಫಡಕೆ,ಸಂಚಾಲಕರು ಮುಂಡಾಜೆ ಅನುದಾನಿತ ಪ್ರೌಢಶಾಲೆ. ಶ್ರೀಮತಿ ಜಯಂತಿ ಮುಖ್ಯೋಪಾಧ್ಯಾಯರು,ಮುಂಡಾಜೆ ಅನುದಾನಿತ ಪ್ರೌಢಶಾಲೆ, ಶ್ರೀ ಕಜೆ ವೆಂಕಟೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಮುಂಡಾಜೆ ಅನುದಾನಿತ ಪ್ರೌಢಶಾಲೆ ಭಾಗವಹಿಸಲಿದ್ದಾರೆ.

