ಧರ್ಮಸ್ಥಳ:(ಜೂ.18) ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ ಇಂದು ನಡೆಯಿತು.

ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಇ.ವಿಯಂ ಯಂತ್ರದ ಮೂಲಕ ಮತದಾನ ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ಭವ್ಯೇಶ್ (7 ನೇ) ಉಪನಾಯಕಿಯಾಗಿ ಹರ್ಷಿತ (6 ನೇ) ವಿರೋಧ ಪಕ್ಷದ ನಾಯಕನಾಗಿ ಶ್ರವಣ್ (7 ನೇ) ಹಾಗೂ ನಾಯಕಿಯಾಗಿ ಸಾನಿಧ್ಯ (6 ನೇ)ಆಯ್ಕೆಯಾದರು.


ನಿಡ್ಲೆ ಕ್ಲಸ್ಟರ್ ನ ಸಿ ಆರ್ ಪಿ ಶ್ರೀಮತಿ ಪ್ರತಿಮಾ, ಶಾಲಾ ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು. ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು.

