ಪಡಂಗಡಿ:(ಜೂ.23) ಭ್ರಷ್ಟ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಪಡಂಗಡಿ ಗ್ರಾಮ ಪಂಚಾಯತ್ ಎದುರುಗಡೆ ಪಡಂಗಡಿ ಗರ್ಡಾಡಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಹಿಂದು ವಿರೋಧಿ ಗ್ರಾಮ ಮಟ್ಟದಲ್ಲಿ ಜನರಿಗೆ ಆಗುವ ತೊಂದರೆಗಳನ್ನು ಬೆಳ್ತಂಗಡಿ ಬಿಜೆಪಿ ಮಂಡಲದ ಕಾರ್ಯದರ್ಶಿ ಸಂತೋಷ್ ಕುಮಾರ್ ಜೈನ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ, ಉಪಾಧ್ಯಕ್ಷೆ ವಸಂತಿ.ಪಿ.ಯನ್ ,ಗ್ರಾಮ ಪಂಚಾಯತ್ ಸದಸ್ಯರಾದ ರಿಚರ್ಡ್ ಗೋವಿಯಸ್, ಮೀನಾಕ್ಷಿ ಶೆಟ್ಟಿ, ಶಕುಂತಲಾ, ಶುಭ, ಅಶೋಕ್ ಸಫಲ್ಯ, ಯೋಗಿಶ್ ಭಟ್, ಕೃಷ್ಣಪ್ಪ ಬಂಗಟ, ಸಿ.ಎ.ಬ್ಯಾಂಕ್ ಅಧ್ಯಕ್ಷ ಅಂತೋಣಿ ಫೆರ್ನಾಂಡೀಸ್ , ಉಪಾಧ್ಯಕ್ಷ ನರೇಂದ್ರ ಕುಮಾರ್, ನಿರ್ದೇಶಕರುಗಳಾದ ಕೃಷ್ಣಪ್ಪ ಪೂಜಾರಿ, ನಾರಾಯಣ ಮೂಲ್ಯ, ಪದ್ಮನಾಭ ,ಕೆ,ವೈ. ರವಿ , ಉಮೇಶ್ ಸುವರ್ಣ, ಉಷಾ, ಬಿ ರಾಮು,


ಹಾಲಿನ ಸೊಸೈಟಿಯ ಅಧ್ಯಕ್ಷ ಸುಂದರ ಪೂಜಾರಿ ಪಡಂಗಡಿ ,ಗರ್ಡಾಡಿ ಶಕ್ತಿ ಕೇಂದ್ರದ ಪ್ರಮುಖರಾದ ಅಶ್ವೀತ್ ಕುಲಾಲ್, ದಿನಕರ ಕುಲಾಲ್, ಪಡಂಗಡಿ ಬೂತ್ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ನಾಯ್ಕ, ಉಮೇಶ್ , ಶ್ರೀನಾಥ್ ಕುಲಾಲ್, ಕಾರ್ಯದರ್ಶಿ ಸುರೇಶ್ ಕುಲಾಲ್, ಹಿರಿಯರಾದ ಅಶೋಕ್ ಗೋವಿಯಸ್, ಗರ್ಡಾಡಿ ಬೂತ್ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ರಂಜಿತ್ ಶೆಟ್ಟಿ, ಕಾರ್ಯದರ್ಶಿ ರೋಹಿತ್ ಗೌಡ ,ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿತೇಶ್ ಜೈನ್ ,ಹಿಂದುಸ್ಥಾನ್ ಫ್ರೆಂಡ್ಸ್ ಗರ್ಡಾಡಿ ಇದರ ಗೌರವಾಧ್ಯಕ್ಷ ಗೋಪಾಲ್ ಗರ್ಡಾಡಿ ಹಾಗೂ ಬೂತ್ ಸಮಿತಿಯ ಸದಸ್ಯರು, ಹಿರಿಯ ಕಾರ್ಯಕರ್ತರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

