ಬೆಳ್ತಂಗಡಿ :(ಜೂ.25) ಬೆಳ್ತಂಗಡಿಯ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಇಂದು (ಜೂನ್ 25) ನಡೆಯಿತು.

ಇದನ್ನೂ ಓದಿ: ⭕ನೆಲ್ಯಾಡಿ: ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಗುಡ್ಡ ಕುಸಿತ
ಕಾರ್ಯಕ್ರಮವನ್ನು ಎಸ್ ಡಿ ಎಂ ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ದಿವ್ಯ ಕುಮಾರಿ ಕೆ ಉದ್ಘಾಟಿಸಿ, ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ನಾಯಕತ್ವದ ಮಹತ್ವ ಹಾಗೂ ಜವಾಬ್ದಾರಿಗಳ ಬಗ್ಗೆ ನುಡಿಗಳನ್ನಾಡಿದರು ಮತ್ತು ನೂತನ ಮಂತ್ರಿಗಳಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ.ಆರ್. ಅವರು ಮಂತ್ರಿಗಳಿಗೆ ಬ್ಯಾಡ್ಜ್ ಧರಿಸಿ ಗೌರವಿಸಿದರು. ಶಾಲಾ ನಾಯಕಿ ಪೂರ್ವಿ ಮತ್ತು ಉಪನಾಯಕ ಶ್ರೀ ವಿನೀತ್ ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿ, ನಡವಳಿಕೆಯ ಮೂಲಕ ನೇತೃತ್ವದ ನೈಜ ಅರ್ಥವನ್ನು ತೋರಿಸುವ ಭರವಸೆ ನೀಡಿದರು.
ಅನಘ ಸ್ವಾಗತಿಸಿದರು, ರಕ್ಷಣ್ ಅತಿಥಿ ಪರಿಚಯ ನೀಡಿದರು, ಸಂಜನಾ ವಂದನಾರ್ಪಣೆ ಸಲ್ಲಿಸಿದರು ಹಾಗೂ ನಿಧಿಶಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.



