ಉಜಿರೆ:(ಜೂ.30)ಉಜಿರೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ತಾಣ. ವರ್ಷಪೂರ್ತಿ ನಿರಂತರ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿರುವ ಕಾರ್ಯಕ್ಷೇತ್ರ, ಶಿಕ್ಷಣ, ಉದ್ಯೋಗ, ವ್ಯವಹಾರಗಳನ್ನು ಅರಸಿ ಬಂದು ಇಲ್ಲಿ ನೆಲೆಸಿದವರು ಇಲ್ಲಿನವರೇ ಆಗಿ ಬದಲಾಗಿದ್ದಾರೆ. ಪ್ರಸ್ತುತ ಕಾಲಮಾನದ ಧಾವಂತ, ಉನ್ನತ ಶಿಕ್ಷಣ, ಬಿಡುವಿಲ್ಲದ ಕಾರ್ಯಚಟುವಟಿಕೆಗಳ ಮಧ್ಯೆಯೂ ಉಜಿರೆ ತನ್ನತನವನ್ನು ಎತ್ತಿಹಿಡಿಯುತ್ತಲಿದೆ. ಊರನ್ನು ಪೊರೆವ ಶ್ರೀ ಜನಾರ್ದನ ಸ್ವಾಮಿ ಮತ್ತು ಪರಿವಾರ ದೇವರುಗಳ ದಿವ್ಯಾನುಗ್ರಹದಿಂದ ಇಲ್ಲಿನ ಪೀಳಿಗೆ, ಪುಟಾಣಿ ಮಕ್ಕಳು ಸಂಸ್ಕಾರಭರಿತರಾಗಿ ಬೆಳೆಯುತ್ತಿದ್ದಾರೆ.

ಭಜನೆ ಎನ್ನುವುದು ವಿಭಜನೆ ತಡೆಯುವುದು ಮಾತ್ರವಲ್ಲ, ಭಕ್ತಿಶ್ರದ್ಧೆಗಳನ್ನು ಎಳೆಯ ಮನಸ್ಸುಗಳಲ್ಲಿ ಮೈದಳೆಸಿ ಮನೆಯನ್ನು ಬೆಳಗುತ್ತದೆ ಎನ್ನುವುದು ಸರ್ವವಿಧಿತ ಸಂಗತಿ. ಈ ನಿಟ್ಟಿನಲ್ಲಿ ಶ್ರೀ ಜನಾರ್ದನ ಸ್ವಾಮಿ ಕೃಪಾಕಟಾಕ್ಷದಿಂದ ಛತ್ರಪತಿ ಶಿವಾಜಿ ಕುಣಿತ ಭಜನಾಮಂಡಳಿ ದಿನಾಂಕ 11-02-2025ರಂದು ಕಾರ್ಯಪ್ರವೃತ್ತವಾಯಿತು. ಉಜಿರೆಯ ಎಲ್ಲ ಕೆಲಸಗಳ ಹಿಂದಿನ ಪ್ರೇರಕ ಶಕ್ತಿ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರಿಂದ ವಿದ್ಯುಕ್ತವಾಗಿ ಉದ್ಘಾಟನೆಗೊಂಡ ಭಜನಾ ಮಂಡಳಿ ದೇವಸ್ಥಾನದ ಪ್ರಾಂಗಣ ಮತ್ತು ಮಾರಿಯಮ್ಮ ದೇವಿಯ ಸನ್ನಿಧಾನದಿಂದ ಕುಣಿತ ಭಜನೆಯನ್ನು ಪ್ರಾರಂಭಿಸಿತು. ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ಮಾಡುವವರು ಲಕ್ಷ್ಮೀ ಗ್ರೂಪ್ ಮಾಲಕರಾದ ಶ್ರೀ ಮೋಹನ್ ಕುಮಾರ್ ಇವರು, ಸಮವಸ್ತ್ರದ ಯೋಜನೆಯನ್ನು ಕಾರ್ಯಗತಗೊಳಿಸಿ, ತನ್ನ ಕ್ಷೇತ್ರದಲ್ಲಿ ಭಜನಾ ಸೇವೆಗೆ ಅವಕಾಶ ಕಲ್ಪಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಭಜನಾ ಮಂಡಳಿಗೆ ಗೌರವ ಸಲಹೆಗಾರರಾಗಿ ಭರತ್ ಕುಮಾರ್ ಕೆ , ಅರವಿಂದ ಕಾರಂತ್, ಶಿವಪ್ರಸಾದ್ ಸುರ್ಯ, ಸೌಮ್ಯರಾವ್, ಸಂತೋಷ್ ಅತ್ತಾಜೆ, ಸುಧಾಕರ್ ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ.
ನಾರಾಯಣ ನಾಯ್ಕ ಮಲೆಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಜನಾ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ವಿನೋದಾ ಕುಂಟಿನಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ನಾಗೇಶ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಕೋಡಿಜಾಲು, ಕೋಶಾಧಿಕಾರಿಯಾಗಿ ಮುನೀಷ್, ಲೆಕ್ಕಪರಿಶೋಧಕರಾಗಿ ಶಿವಪ್ರಸಾದ್ ಸುರ್ಯ ಮತ್ತು ಸುಧಾಕರ್ ಭಜನಾಮಂಡಳಿಯ ಯಶಸ್ವಿ ಕಾರ್ಯನಿರ್ವಹಣೆಗೆ ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ್ , ಅನಂತು, ಚಂದ್ರ ರಥಬೀದಿ, ಉದಯ ಕುಂಟಿನಿ, ಸುಜಾತ ಎನ್ , ಗುಣವತಿ ಮಲೆಯಡ್ಕ, ಸಂಚಾಲಕರಾಗಿ ಭಜನಾ ತಂಡದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.
ಪೋಷಕರು, ಭಜಕರ ಅವಿರತ ಶ್ರಮದಿಂದಾಗಿ ಕುಣಿತ ಭಜನಾತಂಡ ಭಗವಂತನ ಸನ್ನಿಧಾನಗಳಲ್ಲಿ ನಿರಂತರ ಭಜನೆಯನ್ನು ಸೇವಾರೂಪದಲ್ಲಿ ಸಲ್ಲಿಸಿದೆ. ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ನೀರಚಿಲುಮೆ, ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ಪಡ್ಪು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ, ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ಕೂರು, ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ, ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ, ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯ ಮೊದಲಾದ ಕಡೆಯ ಭಜನಾ ಸೇವೆ ಎಲ್ಲರ ಮೆಚ್ಚುಗೆಗಳಿಸಿದೆ. ಸಾರ್ವಜನಿಕ ಗಣೇಶೋತ್ಸವ, ಸಾರ್ವಜನಿಕ ಶ್ರೀ ಶಾರದೋತ್ಸವ, ಶನಿಪೂಜಾ ಕಾರ್ಯಕ್ರಮ , ವಿಶ್ವಹಿಂದೂ ಪರಿಷತ್ನ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣೋತ್ಸವದಲ್ಲಿನ ಕಾರ್ಯಕ್ರಮಗಳಲ್ಲೂ ಕೂಡ ಕಾರ್ಯಕ್ರಮ ನೀಡಿದ್ದಾರೆ.
ತಾಲೂಕಿನ ಅನೇಕ ಕಡೆ ಗೃಹಪ್ರವೇಶ, ವಿವಾಹ ಕಾರ್ಯಕ್ರಮ, ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ಯಕ್ಷಗಾನ, ಮಹಾಶಿವರಾತ್ರಿ ಕಾರ್ಯಕ್ರಮ, ಗೋಂದೋಲು ಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆಗೆ ಸೇವಾರೂಪದಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಕುಣಿತ ಭಜನೆ ಮಾತ್ರವಲ್ಲದೆ ಕುಳಿತು ಭಜನೆ ಮತ್ತು ವಿದ್ಯಾರ್ಥಿಗಳ ಮನೆಯಲ್ಲಿ ನಿತ್ಯ ಭಜನೆಯ ಅನುಷ್ಟಾನವನ್ನೂ ನಡೆಸಲಾಗಿದೆ. ಇದರ ಜೊತೆಜೊತೆಗೆ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪುಸ್ತಕಗಳನ್ನು ನೀಡಲಾಗಿದೆ. ಮೊನ್ನೆ ನಡೆದ ಭಜಕೆರೆ ಗೊಬ್ಬು ಕಾರ್ಯಕ್ರಮದಲ್ಲಿ ಉತ್ತಮ ಸಹಕಾರ ನೀಡಲಾಯಿತು.
ಭಜನಾ ತಂಡಕ್ಕೆ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ವಿಶೇಷ ಸಹಕಾರ ನೀಡಿದ್ದಾರೆ. ಮೋಹನ್ ಕುಮಾರ್ ಸಮವಸ್ತ್ರ ವಿತರಣೆಯನ್ನು ಮಾಡಿ ಸಹಕರಿಸಿದ್ದಾರೆ. ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್ ಸತೀಶ್ಚಂದ್ರ ಸುರ್ಯ, ಅರವಿಂದ ಕಾರಂತ್ ಉಜಿರೆ, ಶಿವಪ್ರಸಾದ್ ಸುರ್ಯ, ಹುಕುಂರಾಮ್ ಪಟೇಲ್, ರಾಜ್ ಕುಮಾರ್ ಮ್ಯಾನೇಜರ್, ವಿಶೇಷ ಧನಸಹಕಾರವನ್ನು ಮಾಡಿದ್ದಾರೆ. ಅಭ್ಯಾಸಕ್ಕೆ ಶಾರದಾಮಂಟಪದ ವ್ಯವಸ್ಥೆಯನ್ನು ಭರತ್ ಕುಮಾರ್ ಇವರು ಮಾಡಿಕೊಟ್ಟಿದ್ದಾರೆ. ಕಾರ್ಯಕ್ರಮದ ಸ್ವಾಗತವನ್ನು ಸಂತೋಷ್ ಅತ್ತಾಜೆ, ಧನ್ಯವಾದವನ್ನು ಶ್ರೀಮತಿ ಗುಲಾವತಿ ನಾರಾಯಣ್ ನಾಯ್ಕ , ನಿರೂಪಣೆಯನ್ನು ಶಿವಪ್ರಸಾದ್ ಸುರ್ಯ ರವರು ನೆರವೇರಿಸಿಕೊಟ್ಟರು.


