Fri. Jul 4th, 2025

Puttur: ಹೆರಿಗೆ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿ ಮಹಿಳೆ ಮೃತ್ಯು

ಪುತ್ತೂರು:(ಜು.4) ಹೆರಿಗೆ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿ ಕರ್ನೂರಿನ ಮಹಿಳೆಯೋರ್ವರು ಮೃತರಾದ ಘಟನೆ ಬಗ್ಗೆ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ⭕Mangaluru: ಹೃದಯಾಘಾತಕ್ಕೆ ಇನ್ಫೋಸಿಸ್ ಉದ್ಯೋಗಿ ಬಲಿ


ಕರ್ನೂರು ಮೊಹಮ್ಮದ್ ಬಶೀರ್ ಕೆ.ಎ.ಅವರ ಪತ್ನಿ ಆಯಿಷತ್ ಸೌಜಾನ ಮೃತಪಟ್ಟವರು

ಆಯಿಷತ್‌ ಸೌಜಾನ ಅವರನ್ನು ಜೂ.27ರಂದು ಹೆರಿಗೆಗಾಗಿ ಆಕೆಯ ಗಂಡ ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಆರೈಕೆಯಲ್ಲಿ ಜುಬೈದಾ ಕಾವು ಅವರು ಇದ್ದರು. ಜು. 1ರಂದು ಬೆಳಿಗ್ಗೆ 05.30 ಗಂಟೆಗೆ ಆಯಿಷತ್‌ ಸೌಜಾನರಿಗೆ ಸಾಮಾನ್ಯ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಆಕೆಗೆ ವಿಪರೀತ ರಕ್ತಸ್ರಾವ ಉಂಟಾಗಿದ್ದರಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಯಿಷತ್‌ ಸೌಜಾನರವರು ವಿಪರೀತ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಅವರ ಅಣ್ಣ ಜಾಲ್ಲೂರು ಸಣ್ಣಕದಿಕೆ ಮಹಮ್ಮದ್ ಶಿಹಾಬುದ್ದೀನ್ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *