ಮಚ್ಚಿನ :(ಆ.1) ಬ್ಯಾಂಬು ಸೊಸೈಟಿ ಆಫ್ ಇಂಡಿಯಾ ಬಿದಿರು ಗ್ರಾಮಗಳ ಕ್ಲಸ್ಟರ್ ಯೋಜನೆ ಹಾಗೂ ಬೆಳ್ತಂಗಡಿ ರಬ್ಬರ್ ಸೊಸೈಟಿ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಸಹಕಾರದೊಂದಿಗೆ 1250 ಬಿದಿರು ಗಿಡ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ⭕ಬೆಂಗಳೂರು: ಬಾಲಕನ ಕಿಡ್ನಾಪ್ ಮಾಡಿ ಕತ್ತು ಸೀಳಿ ಪೆಟ್ರೋಲ್ ಸುರಿದು ಕೊಲೆ
ಅನಂತೇಶ್ವರ ದೇವಸ್ಥಾನ ಬಳ್ಳಮಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ ಮತ್ತು ದೇವಸ್ಥಾನ ಗುಮಾಸ್ತ ಬಾಲಕೃಷ್ಣ ಭಟ್ ಹಾಗೂ ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ಬಿದಿರು ಗಿಡವನ್ನು ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಬಾಲಕೃಷ್ಣ ರವರು ವಿತರಣೆ ಮಾಡಿದರು.
ಬಿದಿರು ಬ್ಯಾಂಬು ಸೊಸೈಟಿಯ ಮೇಲ್ವಿಚಾರಕರಾದ ಕುಮಾರ ನಾಥ್ ರವರು ಬಿದಿರು ಕೃಷಿ ಬಗ್ಗೆ ಮಾತನಾಡಿ, ಬಿದಿರು ವೇಗವಾಗಿ ಬೆಳೆಯುವ ಕೃಷಿಯಾಗಿದೆ. ಬಿದಿರಿನ ಬಹುಮುಖ ಉಪಯೋಗಗಳು ನಿರ್ಮಾಣ ಕಟ್ಟಡದ ಒಳಾಂಗಣ ಅಲಂಕಾರಕ್ಕಾಗಿ, ಪೀಠೋಪಕರಣಗಳ ತಯಾರಿಕೆಗಾಗಿ ಅಗರಬತ್ತಿ ತಯಾರಿಕೆಗೆ ಕಾಗದ ತಯಾರಿಕೆಗೆ ಅತೀ ಹೆಚ್ಚು ಉಪಯೋಗವಾಗುತ್ತದೆ. ಬಿದಿರು ಗಿಡ ನಾಟಿ ಮಾಡುವ ವಿಧಾನ ಬಳಸಬೇಕಾದ ಗೊಬ್ಬರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಮಡಂತ್ಯಾರ್ ವಲಯದ ಮೇಲ್ವಿಚಾರದ ಕೇಶವ ನಾಯ್ಕ, ಒಕ್ಕೂಟದ ಅಧ್ಯಕ್ಷರಾದ ವಿಜಯ್ ಮಡಕ್ಕಿಲ, ಮಚ್ಚಿನ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸುಧಾ, ಕೃಷಿ ಮೇಲ್ವಿಚಾರಕರಾದ ಕೃಷ್ಣ, ಮಚ್ಚಿನ ಸೇವಾ ಪ್ರತಿನಿಧಿ ಪರಮೇಶ್ವರ, ಕುದ್ರಡ್ಕ ಸೇವಾ ಪ್ರತಿನಿಧಿ ಶ್ರೀಮತಿ ನಂದಿನಿ, ಶೌರ್ಯ ಘಟಕದ ಪ್ರತಿನಿಧಿ ಪ್ರಭಾಕರ ಉಪಸ್ಥಿತರಿದ್ದರು.
