Mon. Aug 18th, 2025

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ಚೆಕ್ ವಿತರಣೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡಾಜೆ ವಲಯದ ಕಲ್ಮಂಜ ಒಕ್ಕೂಟದ ಧಾರಿಣಿ ತಂಡದ ಸದಸ್ಯೆ ಹೇಮಾವತಿ ಅವರ ಪುತ್ರ ದುರ್ಗಾಪ್ರಸಾದ್ ಅವರು ಬೈಕ್ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಒಟ್ಟು 4.5ಲಕ್ಷ ದವರೆಗೆ ಚಿಕಿತ್ಸಾ ವೆಚ್ಚ ಖರ್ಚಾ ಗಿದ್ದು, ಮುಂದಿನ ಚಿಕಿತ್ಸೆ ಗಾಗಿ ಯೋಜನೆ ಯಿಂದ ಮಂಜೂರಾದ ರೂ 25000/-ಮೊತ್ತದ ಸಹಾಯ ಧನದ ಚೆಕ್ ಅನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: 🟠ಚಾರ್ಮಾಡಿ :ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ


ಗ್ರಾ. ಪಂಚಾಯತ್ ಸದಸ್ಯ ಶ್ರೀಧರ ಮಡಿವಾಳ ಇವರ ಕೈಯಿಂದ ಗಾಯಾಳುವಿನ ತಾಯಿ ಹೇಮಾವತಿರವರ ಇದನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸದಸ್ಯ ವಸಂತ ಮಡಿವಾಳ, ಒಕ್ಕೂಟದ ಅಧ್ಯಕ್ಷ ಬಿ.ಎನ್ ಹಮೀದ್, ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ಧನ ಮಾಚಾರು, ಕಲ್ಮಂಜ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜಿಶಾ, ಶೌರ್ಯ ವಿಪತ್ತು ತಂಡದ ಸುಧೀರ್ ಮತ್ತು ಮನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
.

Leave a Reply

Your email address will not be published. Required fields are marked *