ಉಜಿರೆ: ವಿದ್ಯಾರ್ಥಿಗಳು ಮೊದಲು ತಮ್ಮ ಮಾರ್ಗವನ್ನು ತಿಳಿಯಬೇಕು. ತಮಗೆ ಇಷ್ಟವಾದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಮೃತ್ ಹಾಗೂ ಪರೀಕ್ಷಿತ್ ಗೋಖಲೆ ಹೇಳಿದರು.

ಇದನ್ನೂ ಓದಿ: 🔴ಕನ್ಯಾಡಿ: ಕನ್ಯಾಡಿಯಲ್ಲಿ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಶುಭಾರಂಭ
ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವಿತೀಯ ವಿಜ್ಞಾನದ ತರಗತಿಯಲ್ಲಿ ಅಮೃತ್ ಅವರು ಮೂಲ ವಿಜ್ಞಾನದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ಸ್ವಾಗತಿಸಿ , ಸಂಸ್ಕೃತ ಸಂಘದ ಉಪಾಧ್ಯಕ್ಷ ಯಶಸ್ವಿ ವಂದಿಸಿದರು . ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ನಿರೂಪಿಸಿದರು.

ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾ ತರಗತಿಯಲ್ಲಿ ಪರೀಕ್ಷಿತ್ ಗೋಖಲೆ ಅವರು ವಾಣಿಜ್ಯಶಾಸ್ತ್ರದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಹ ಸಂಯೋಜಕಿ ಶ್ರೀಪೂರ್ಣಾ ನಿರೂಪಿಸಿದರು. ಧರೆಶ್ ಸ್ವಾಗತಿಸಿ , ಸಿರಿ .ಜಿ. ಗೌಡ ವಂದಿಸಿದರು .
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಕನ್ನಡ ಉಪನ್ಯಾಸಕ ಸುಭಾಷ್ ರಾವ್ ಉಪಸ್ಥಿತರಿದ್ದರು.


