ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳ (ಆರ್. ಸಿ.ಸಿ) ಇದರ ಕಲ್ಮಂಜ, ಮುಂಡಾಜೆ, ಕರ್ಕಿಂಜೆ ಹಾಗೂ ನೆರಿಯ ಘಟಕಗಳ ಪದಾಧಿಕಾರಿಗಳ ಆಯ್ಕೆ ಉಜಿರೆಯ ಓಶನ್ ಪರ್ಲ್ ನಲ್ಲಿ ನಡೆಯಿತು.

ಇದನ್ನೂ ಓದಿ: ⭕ಕಡಬ: ಹೃದಯಾಘಾತದಿಂದ ಯುವಕ ಸಾವು
ಬೆಳ್ತಂಗಡಿ ರೋಟರೀ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಅಧ್ಯಕ್ಷತೆಯಲ್ಲಿ ಆರ್. ಸಿ.ಸಿ ಕಲ್ಮಂಜ ಘಟಕದ ಅಧ್ಯಕ್ಷರಾಗಿ ಶ್ರೀ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ ಶ್ರೀ ದಿನೇಶ ಗೌಡ ಬನದ ಬೈಲು ಮತ್ತು ಕೋಶಾಧಿಕಾರಿಯಾಗಿ ಶ್ರೀ ಡಿ. ಜಯಂತ್ ರಾವ್ ಆಯ್ಕೆಯಾದರು.

ಕಳೆದ ವರ್ಷದ ಆರ್.ಸಿ.ಸಿ ಕಲ್ಮಂಜದ ಅಧ್ಯಕ್ಷ ಶ್ರೀ ಸತೀಶ್ ಭಟ್ ತಂತ್ಯಾ ಅವರಿಂದ ಶ್ರೀ ನಾಗೇಶ ಕಲ್ಮಂಜ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.


