ನಾರಾವಿ: ನಾರಾವಿ ವಲಯದ ಸುಲ್ಕೇರಿ ಕಾರ್ಯಕ್ಷೇತ್ರದ ಮುಳ್ಳಗುಡ್ಡೆ ಎಂಬಲ್ಲಿ ರಚನೆಗೊಳ್ಳುತ್ತಿರುವ ಹಿಂದೂರುದ್ರಭೂಮಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1,60,000/- ಮೌಲ್ಯದ ಸಿಲಿಕಾನ್ ಚೇಂಬರ್ ಮಂಜೂರಾತಿ ಆಗಿದ್ದು ,

ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಅಶೋಕ ಬಿ ಹಾಗೂ ನಿವೃತ್ತ ನಿರ್ದೇಶಕರಾದ ವಿಶ್ವನಾಥ ಶೆಟ್ಟಿ, ಸುಲ್ಕೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಕೊರಗಪ್ಪ ನಾಯ್ಕ ರಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು ಶುಭಕರ ಪೂಜಾರಿ, ಸದಸ್ಯರಾದ ನಾರಾಯಣ ಪೂಜಾರಿ, ಪ್ರೇಮ, ರವಿ, ಪಂಚಾಯತ್ ಸಿಬ್ಬಂದಿಯಾದ ದಿನೇಶ ,ಸುಪ್ರಿಯಾ, ಭಾಸ್ಕರ, ಗ್ರಾಮ ಸಮಿತಿ ಅಧ್ಯಕ್ಷರಾದ ರಾಮಶೆಟ್ಟಿ, ಜನ ಜಾಗೃತಿ ಸದಸ್ಯರಾದ ಸದಾನಂದ ಗೌಡ, ಒಕ್ಕೂಟದ ಉಪಾಧ್ಯಕ್ಷರಾದ ಕೀರ್ತನ್ ಪೂಜಾರಿ, ವಿಪತ್ತು ಸಂಯೋಜಕರಾದ ದಿನೇಶ ಶೆಟ್ಟಿ ವಲಯದ ಮೇಲ್ವಿಚಾರಕರಾದ ವಿಶಾಲ ಕೆ, ಸೇವಾಪ್ರತಿನಿಧಿ ಮಮತ ಶೆಟ್ಟಿ ಉಪಸ್ಥಿತರಿದ್ದರು.





