Tue. Feb 18th, 2025

Uppinangadi: ಪಂಜಳದಲ್ಲಿ ಹೆದ್ದಾರಿಗೆ ನುಗ್ಗಿದ ನದಿ ನೀರು – ಪೊಲೀಸರ ಕಟ್ಟೆಚ್ಚರ

ಉಪ್ಪಿನಂಗಡಿ: (ಜು.30) ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಅಬ್ಬರ ತೀವ್ರಗೊಂಡ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದಿದ್ದು, ನದಿ ನೀರು ರಸ್ತೆಗೆ ನುಗ್ಗಿದೆ.

ಇದನ್ನೂ ಓದಿ: 🛑ಉಜಿರೆ: ರಣ ಮಳೆಗೆ ಉಜಿರೆಯ ಎಸ್‌ ಡಿ ಎಂ ಆಸ್ಪತ್ರೆ ಬಳಿಯ ತಡೆಗೋಡೆ ಕುಸಿತ

ಪಂಜಳದಲ್ಲಿ ಹೆದ್ದಾರಿಗೆ ನೀರು ನುಗ್ಗಿದ್ದು, ನೇತ್ರಾವತಿ ನದಿ ಸಮುದ್ರದಂತೆ ಭಾಸವಾಗಿದೆ. ಇದೇ ಭಾಗದಲ್ಲಿ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ರಸ್ತೆಯಲ್ಲಿ ವಾಹನ ಚಲಾಯಿಸದಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಹೆದ್ದಾರಿಯಲ್ಲಿ ಬಂಡೆ ಹಾಗೂ ಭೂ ಕುಸಿತ ಉಂಟಾಗುವ ಭೀತಿಯೂ ಎದುರಾಗಿದೆ.

ಪಂಜಳದಲ್ಲಿ ನದಿ ನೀರು ರಸ್ತೆಗೆ ನುಗ್ಗಿರುವುದರಿಂದ ಸ್ಥಳದಲ್ಲಿ ಪೊಲೀಸರು ನಿಂತು ಕಟ್ಟೆಚ್ಚರ ವಹಿಸುತ್ತಿದ್ದಾರೆ. ನದಿ ಬಳಿ ಯಾರೂ ತೆರಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *