Sat. Apr 19th, 2025

Udupi: ಸೆಕ್ಯೂರಿಟಿ ಗಾರ್ಡ್ ನಿಂದ ಶೋರೂಂ ಕ್ಲಸ್ಟರ್ ಮ್ಯಾನೇಜರ್ ಮೇಲೆ ಚೂರಿ ಇರಿತ

ಉಡುಪಿ:(ಆ.13) ಸೆಕ್ಯೂರಿಟಿ ಗಾರ್ಡ್ ನಿಂದ ಶೋರೂಂ ಕ್ಲಸ್ಟರ್ ಮ್ಯಾನೇಜರ್ ಮೇಲೆ ಚೂರಿ ಇರಿದ ಘಟನೆ ಉಡುಪಿಯ ಹರ್ಷ ಶೋರೂಂ ನಲ್ಲಿ ನಡೆದಿದೆ. ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು.

ಇದನ್ನೂ ಓದಿ: 🛑ಉಜಿರೆ: “ನಾನು ಭ್ರಷ್ಟಾಚಾರ ಮಾಡಿಲ್ಲ ಅಂತ ಮಾರಿಗುಡಿಯಲ್ಲಿ ನಾಳೆ ಪ್ರಮಾಣ ಮಾಡುತ್ತೇನೆ”- ಶಾಸಕ ಹರೀಶ್ ಪೂಂಜ

ಘಟನೆಯ ವಿವರ:
ಹರ್ಷ ಶೋರೂಂನಲ್ಲಿ ರೋನ್ಸನ್ ಕ್ಲಸ್ಟರ್ ಮ್ಯಾನೇಜರ್ ಆಗಿದ್ದರು. ಅಲ್ಲೇ ಸೆಕ್ಯುರಿಟಿಯಾಗಿ ಪ್ರಸಾದ್ ಕೆಲಸ ಮಾಡುತ್ತಿದ್ದನು. ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್ ಗೆ ವಾರ್ನಿಂಗ್ ನೀಡಲಾಗಿತ್ತು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ಕೇಳಿಕೊಂಡಿದ್ದ. ಮರುದಿನ ಮೀಟಿಂಗ್ ನಲ್ಲಿ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದನು. ಮಾತುಕತೆ ಬಳಿಕ ಆರೋಪಿ ಪ್ರಸಾದ್ ಗ್ರೌಂಡ್ ಫ್ಲೋರ್ ನಲ್ಲಿ ಕಾದು ಕುಳಿತಿದ್ದ. ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಿಂದ ಇರಿಯಲು ಪ್ರಯತ್ನಪಟ್ಟಿದ್ದಾನೆ. ಪ್ರಾಣಪಾಯ ಅರಿತು ರೋನ್ಸನ್ ಓಡಿದ್ದಾನೆ. ರೋನ್ಸನ್ ಬೆನ್ನಟ್ಟಿ ಹೋಗಿ ಆರೋಪಿಯಿಂದ ಕೊಲೆಗೆ ಯತ್ನ ನಡೆದಿದೆ. ರೋನ್ಸನ್ ಮೇಲಿನ ಹಲ್ಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *