Fri. Apr 11th, 2025

Shivamogga: ಜೀವಕ್ಕೆ ಕುತ್ತು ತಂದ ಫೋನ್‌ – ಅಷ್ಟಕ್ಕೂ ದಂಪತಿ ನಡುವೆ ಆಗಿದ್ದೇನು?!!

ಶಿವಮೊಗ್ಗ:(ನ.10) ಗಂಡ ಹೆಂಡತಿ ಜಗಳ ಯಾವಾಗಲೂ ಇದ್ದದ್ದೇ, ಒಮ್ಮೆ ಜಗಳ ಆದರೆ ಮತ್ತೊಮ್ಮೆ ಜಗಳ ಸರಿ ಆಗಿ ಒಂದಾಗಿರುತ್ತಾರೆ. ಆದರೆ, ಇಲ್ಲೊಂದು ಘಟನೆ ನಡೆದಿದೆ. ಊಟ ಬಡಿಸದೇ ಫೋನ್ ನಲ್ಲಿ ಬ್ಯುಸಿ ಯಾಗಿದ್ದ ಪತ್ನಿಯನ್ನು ಪತಿಯೇ ಕೊಂದ ಘಟನೆ ನಡೆದಿದೆ.

ಇದನ್ನೂ ಓದಿ: ⭕ಕೇರಳ: ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡಿದ ಪತಿ

ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಮನೋಜ್ ಮತ್ತು ಗೌರಮ್ಮ ದಂಪತಿಗಳ ನಡುವೆ ಕಲಹ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.


ಪತ್ನಿ ಗೌರಮ್ಮ ಫೋನ್ ಬಳಕೆ ಹೆಚ್ಚಾಗಿದ್ದರಿಂದ ಬೇಸತ್ತಿದ್ದ ಪತಿ ಆ ದಿನ ಊಟ ಬಡಿಸುವಂತೆ ಹೇಳಿದರು ಪತ್ನಿ ಕ್ಯಾರೆ ಎನ್ನದೆ ಫೋನ್ ನಲ್ಲಿ ಬ್ಯುಸಿ ಯಾಗಿದ್ದಳು.


ಇದರಿಂದ ಕೋಪಗೊಂಡ ಪತಿ ಮನೋಜ್ ಪತ್ನಿಗೆ ಹಲ್ಲೆ ನಡೆಸಿ ನಂತರ ಟವಲ್ ನಿಂದ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿದ್ಧಾನೆ.
ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು