Sat. Mar 15th, 2025

ಮಂಗಳೂರು:(ಡಿ.28) ಆನ್ಲೈನ್‌ ಹೂಡಿಕೆ ಮಾಡಿ ಹಣ ಕಳೆದುಕೊಂಡ ಪರಿಣಾಮ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಆರ್ ಪಿ ಸಿ ಎಂಬ ಆಪ್ ಹಣ ಹೂಡಿಕೆಯ ಜಾಲ ಜಿಲ್ಲೆಯಾದ್ಯಂತ ಪಸರಿಸಿದ್ದು ಡಿ.24 ರಂದು ಆಪ್ ಸ್ಥಗಿತಗೊಂಡಿತ್ತು.


ಅದೇ ದಿನ ಮೂಡುಶೆಡ್ಡೆ ನಿವಾಸಿ ಸೂರ್ಯ (24) ನಾಪತ್ತೆಯಾಗಿದ್ದರು. ಗುರುವಾರ ಅವರ ಮೃತದೇಹ ಮರವೂರು ನದಿಯಲ್ಲಿ ಪತ್ತೆಯಾಗಿದೆ.

ಅವರು ಆರ್ ಪಿ ಸಿ ಆಪ್ ನಲ್ಲಿ ಸುಮಾರು 70,000 ರೂಪಾಯಿ ಹೂಡಿಕೆ ಮಾಡಿದ್ದು, ಕಂಪನಿ ಮುಚ್ಚಲ್ಪಟ್ಟ ಪರಿಣಾಮ ಸಾಲದ ಹೊರೆಯಲ್ಲಿ ಬಿದ್ದಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *