ಬೆಳ್ತಂಗಡಿ :(ಪೆ.6) ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವತಿಯಿಂದ ಫೆ.9ರಂದು ಬೆಳಾಲಿನ ಅನಂತೋಡಿಯ ಅನಂತ ಪದ್ಮನಾಭ ದೇವಸ್ಥಾನದ ಬಳಿಯಲ್ಲಿರುವ 5 ಎಕರೆ ಗದ್ದೆಯಲ್ಲಿ 1000ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರಿಂದ ಭತ್ತ ಕಟಾವು ಕಾರ್ಯಕ್ರಮ ಫೆ.9 ರಂದು ನಡೆಯಲಿದೆ.
![](https://uplustv.com/wp-content/uploads/2025/02/WhatsApp-Image-2024-10-18-at-11.21.38_8ae796c7-1-667x1024.jpg)
ಈ ಹಿನ್ನೆಲೆ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರು ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಈ ವೇಳೆ ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸಾದ್, ಯು ಪ್ಲಸ್ ಟಿವಿಯ ಮುಖ್ಯಸ್ಥ ದಿನೇಶ್ ಕೋಟ್ಯಾನ್ ಮತ್ತಿತರು ಜೊತೆಗಿದ್ದರು.
![](https://uplustv.com/wp-content/uploads/2025/02/51b5a0cd-f9b6-499f-a45b-f15e5ee2ea78-1-1024x1024.jpg)
![](https://uplustv.com/wp-content/uploads/2025/02/057b1d26-13c1-450b-9ca4-33b6e7226863-1-810x1024.jpg)
![](https://uplustv.com/wp-content/uploads/2025/02/muli-1.jpg)
![](https://uplustv.com/wp-content/uploads/2025/02/u-plus-poster-1.jpg)
ಕತ್ತಿ, ಮುಟ್ಟಾಳೆ ರೆಡಿ…!
ಫೆ. 9 ರಂದು 1000ಕ್ಕೂ ಹೆಚ್ಚು ಯುವಕ-ಯುವತಿಯರು ಗದ್ದೆಗೆ ಇಳಿದು ರೈತರಂತೆ ಭತ್ತ ಕಟಾವು ಮಾಡಲಿದ್ದಾರೆ. ಈಗಾಗಲೇ ಭತ್ತ ಕಟಾವಿಗೆ ಬೇಕಾದ 1000 ಪರ್ದ ಕತ್ತಿಗಳು ತಯಾರಾಗಿದೆ. ಅಲ್ಲದೇ ಕಟಾವು ಮಾಡಿದ ಭತ್ತವನ್ನು ದೇವಸ್ಥಾನದ ಅಂಗಳಕ್ಕೆ ತರಲು ಈಗಾಗಲೇ 1000 ಮುಟ್ಟಾಳೆ ಕೂಡ ರೆಡಿಯಾಗಿದೆ.
![](https://uplustv.com/wp-content/uploads/2025/02/WhatsApp-Image-2024-07-12-at-16.54.12_23b03a5a-1.jpg)