ಕಡಬ:(ಎ.೧೭) ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ ವ್ಯಕ್ತಿಯೋರ್ವರು ವೇದಿಕೆಗೆ ನುಗ್ಗಿ ಅರ್ಥಧಾರಿಯ ಮೈಮೇಲೆ ಎರಗಿದ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ⭕Mangaluru: ಮೆಹಂದಿ ಹಾಕಲೆಂದು ಬ್ಯೂಟಿಪಾರ್ಲರ್ಗೆ ಹೋದ ವಧು ನಾಪತ್ತೆ!!
ಕಡಬದ ನಂದುಗುರಿ ಎಂಬಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ವಿದ್ಯುನ್ಮಾಲಿ ಹಾಗೂ ಅಧಿತಿ ಸಂಭಾಷಣೆ ನಡೆಯುತ್ತಿದ್ದ ಈ ವೇಳೆ ಸಭೆಯಿಂದ ಏಕಾಏಕಿ ಓಡೋಡಿ ಬಂದ ವ್ಯಕ್ತಿಯೋರ್ವರು ಅರ್ಥಧಾರಿಯ ಮೇಲೆ ಎರಗಿದ್ದಾರೆ.

ಏಕಾಏಕಿ ವೇದಿಕೆ ಮೇಲೆ ಹಾರಿ ಬಂದ ವ್ಯಕ್ತಿಯ ವರ್ತನೆಯಿಂದ ಕಲಾವಿದರು , ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ. ಕೂಡಲೇ ಆತನನ್ನು ತಡೆದು ಇತರರ ಸಹಕಾರದಿಂದ. ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿದೆ.
ವೇದಿಕೆಗೆ ನುಗ್ಗಿದ ವ್ಯಕ್ತಿ ಸ್ಥಳೀಯ ನಿವಾಸಿ ರಾಧಾಕೃಷ್ಣ ಎಂದು ಗುರಿತಿಸಲಾಗಿದ್ದು ಮೈ ಮೇಲೆ ಆವೇಶ ಬಂದ ರೀತಿಯಲ್ಲಿ ವರ್ತಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.



