ಮಂಗಳೂರು:(ಎ.17) ವಿವಾಹದ ಹಿಂದಿನ ದಿನ ವಧು ನಾಪತ್ತೆಯಾಗಿರುವ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ☘ಉಜಿರೆ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಾಣದ ಸವಿನೆನಪಿಗಾಗಿ
ಬೋಳಾರದ ನಾರಾಯಣ ಎಂಬುವವರ ಪುತ್ರಿ ಪಲ್ಲವಿ (22) ಕಾಣೆಯಾದ ವಧು.

ನಿಶ್ಚಿತಾರ್ಥ ಎಲ್ಲ ಈಕೆಯ ಒಪ್ಪಿಗೆಯಂತೆ ನಡೆದಿತ್ತು. ಎ.16 ರಂದು ವಿವಾಹ ನಿಗದಿ ಪಡಿಸಲಾಗಿತ್ತು. ಎ.15 ರಂದು ಮಧ್ಯಾಹ್ನ ಮೆಹಂದಿ ಹಾಕಲೆಂದು ಬ್ಯೂಟಿಪಾರ್ಲರ್ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ವಾಪಸ್ ಬಂದಿಲ್ಲ. ಪಲ್ಲವಿಯ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ದೂರಿನಲ್ಲಿ ವಧು ಮನೆಯವರು ಪೊಲೀಸರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.



