ಪುತ್ತೂರು: (ಎ.23) ಮುಳಿಯ ದ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಎಪ್ರಿಲ್ 24, ಗುರುವಾರ ಸಂಜೆ 6 .30 ಕ್ಕೆ “ಜೀ ಸರಿಗಮಪ ಖ್ಯಾತಿಯ ಕಲಾವಿದರಿಂದ ಮಧುರ ನೆನಪುಗಳಿಗೆ ನಾದ ಸ್ಪರ್ಶದ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ: 🛑ಪುತ್ತೂರು : ಪುತ್ತೂರಿನಲ್ಲಿ ಸಿಡಿದೆದ್ದ ಬ್ರಾಹ್ಮಣ ಸಮಾಜ – ಸಹಾಯಕ ಕಮೀಷನರ್ ಮೂಲಕ ಸರಕಾರಕ್ಕೆ ಮನವಿ
ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ ‘ರಸಮಂಜರಿ’ ಕಾರ್ಯಕ್ರಮದಲ್ಲಿ ಜೀ ಸರಿಗಮಪ ಸೀಸನ್-20 ರ ಕ್ವಾರ್ಟರ್-ಫೈನಲಿಸ್ಟ್ ಅನ್ವಿತ್ ಕುಮಾರ್ ಸಿ ವಿ, ಜೀ ಸರಿಗಮಪ ಸೀಸನ್-19 ರ ಸೆಕೆಂಡ್ ರನ್ನರ್ ಅಪ್ ತನುಶ್ರೀ ಮಂಗಳೂರು, ರಿದಂ ಪ್ಯಾಡ್ – ಸಚಿನ್ ಪುತ್ತೂರು, ಮಲ್ಹೋತ್ರ ಅಶ್ವಿನ್ ಬಾಬಣ್ಣ, ತಬಲ – ಶರತ್ ಪೆರ್ಲ ಮುಂತಾದವರು ಚಿನ್ನದಂತಹ ಸಂಗೀತ ಮಾಧುರ್ಯವನ್ನು ನೀಡಲಿರುವರು. ಮುಳಿಯ ಶೋರೂಮ್ ಮೇಲಿರುವ ಅಪರಂಜಿ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.



