Khushboo Rajpurohit:(ಜೂ.13)ಸಪ್ತಸಾಗರದಾಚೆಯಿದ್ದ ಗಂಡನ ಭೇಟಿಯಾಗಲು ವಿಮಾನ ಹತ್ತಿದ್ದ ನವವಧು ವಿಮಾನ ದುರಂತದಲ್ಲಿ ಕಣ್ಮುಚ್ಚಿದ್ದಾಳೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್ಪುರೋಹಿತ್ ಎಂಬಾಕೆ ಇದೇ ವರ್ಷದ ಜನವರಿಯಲ್ಲಿ, ಮನ್ಫೂಲ್ ಸಿಂಗ್ ಅನ್ನೋರನ್ನು ಮದುವೆ ಆಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿದ್ದರಂತೆ. ಹೀಗಾಗಿ ಪತಿಯನ್ನು ಮೊದಲ ಬಾರಿ ಭೇಟಿಯಾಗಲು ಖುಷ್ಬು ಲಂಡನ್ ಫ್ಲೈಟ್ ಹತ್ತಿದ್ದರು.

ಇದನ್ನೂ ಓದಿ: ⭕Ahmedabad plane crash: ಲಕ್ಕಿ ನಂಬರೇ ಅನ್ ಲಕ್ಕಿಯಾಯ್ತು!!
ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳ ನೆಲಕ್ಕುರುಳಿ ಬೆಂಕಿ ಉಗುಳಿತ್ತು. ಈ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿ 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್ಗಳಿಗಿಂತ ಹೆಚ್ಚು ಇಂಧನ ತುಂಬಲಾಗಿತ್ತು. ವಿಮಾನ ಪತನಗೊಂಡ ಕೂಡಲೇ ಅಷ್ಟೂ ಇಂಧನಕ್ಕೆ ಬೆಂಕಿ ತಗುಲಿ ದೊಡ್ಡ ಅನಾಹುತ ಸಂಭವಿಸಿದೆ.



ಖುಷ್ಬೂ ಅವರಂತೆ.. ಯುಕೆಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದವರು, ಬಿಸ್ನೆಸ್ ಮಾಡಲು ತೆರಳುತ್ತಿದ್ದವರು, ಉದ್ಯೋಗಕ್ಕಾಗಿ ಹೋಗುತ್ತಿದ್ದವರು ಅನೇಕರಿದ್ದರು. ಕನಸುಗಳ ಬುತ್ತಿ ಕಟ್ಟಿ ಲಂಡನ್ ವಿಮಾನ ಹತ್ತಿದವರು ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಮಾತ್ರ ಬದುಕುಳಿದಿದ್ದಾರೆ.

