ವೇಣೂರು:(ಜೂ.22) ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ವಿದ್ಯಾರ್ಥಿ ಸಂಘ ಮತ್ತು ವಿಶ್ವ ಪರಿಸರ ದಿನ, ವಿಶ್ವ ಯೋಗ ದಿನಾಚರಣೆಯು ದಿನಾಂಕ 21 -06- 25 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ಅಧ್ಯಕ್ಷತೆಯನ್ನು ವಹಿಸಿದ್ದು, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ತಿಳಿಸಿದರು.

ಇದನ್ನೂ ಓದಿ: 🌱ಮೊಗ್ರು : ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಪರಿಸರ ದಿನಾಚರಣೆ
ಹಾಗೆಯೇ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ವಿಶ್ವ ಪರಿಸರ ದಿನ ಮತ್ತು ಶಾಲಾ-ಕಾಲೇಜಿನ ನಾಯಕರಿಗೆ ತಮ್ಮ ಕರ್ತವ್ಯವನ್ನು ಕ್ರಮಬದ್ಧವಾಗಿ ನಿರ್ವಹಿಸಲು ಕಿವಿಮಾತು ನೀಡಿದರು. ಹಾಗೆಯೇ ಅತಿಥಿಯಾಗಿ ಆಗಮಿಸಿದ ಆಲೂರು ಪಂಚಾಯತ್ ಸದಸ್ಯರಾದ ರವೀಂದ್ರ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜೆ ಇ ಇ ಯಲ್ಲಿ 34 ನೇ ರ್ಯಾಂಕ್ ಪಡೆದ ಹಳೆ ವಿದ್ಯಾರ್ಥಿಯಾದ ವಿಘ್ನೇಶ್ ರವರ ಸಹೋದರರಾದ ಪೂಜಿತ್ ಕುಲಾಲ್ ಇವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ನಾಯಕರಾಗಿ ಮಾಸ್ಟರ್ ದಿಗಂತ್ ಉಪನಾಯಕರಾಗಿ ಮಾಸ್ಟರ್ ವಿನಯ್ ಹಾಗೂ ಶಾಲಾ ನಾಯಕರಾಗಿ 9ನೇ ತರಗತಿಯ ಮಾಸ್ಟರ್ ಮಹಮ್ಮದ್ ಅಜೀಮ್, ಸಭಾಪತಿಯಾಗಿ 10ನೇ ತರಗತಿಯ ಮಾಸ್ಟರ್ ಭುವನ್, ಉಪನಾಯಕರಾಗಿ 7ನೇ ತರಗತಿಯ ಮಾಸ್ಟರ್ ಜಯಂತ್ ಹಾಗೂ ಎಲ್ಲಾ ವಿಭಾಗಗಳ ನಾಯಕರುಗಳು ಪ್ರಮಾಣವಚನವನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಓಮನ ಎಂ ಎ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ವೇತಾ ಅಶೋಕ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಹಾಗೂ ಉಪನ್ಯಾಸಕರು ,ಶಿಕ್ಷಕರು, ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ರಶ್ಮಿ ಮತ್ತು ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಮನೋಜ್ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಕುಮಾರಿ ಶರಣ್ಯ ಕೆ ಎಸ್ ರವರು ವಂದಿಸಿದರು.


