Wed. Feb 26th, 2025

Belthangady: ಮುಳಿಯ ಜ್ಯುವೆಲ್ಸ್‌ ನಲ್ಲಿ “ಕಾರು ಡ್ರಾ” ಕಾರ್ಯಕ್ರಮ

ಬೆಳ್ತಂಗಡಿ:(ಫೆ.25) ಮುಳಿಯ ಜುವೆಲ್ಲರ್ಸ್ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಆಭರಣ ಮಳಿಗೆಯಾಗಿ ಬೆಳೆದಿದೆ.

ಇದನ್ನೂ ಓದಿ: ಉಪ್ಪಿನಂಗಡಿ: ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ

ಮುಳಿಯ ಜುವೆಲ್ಲರಿಯ ಬೆಳ್ತಂಗಡಿ ಶಾಖೆಯಲ್ಲಿ ಅಗಸ್ಟ್ 15, 2024ರಿಂದ ನ.30, 2024ರ ಒಳಗಡೆ 20 ಸಾವಿರ ರೂಪಾಯಿಗಿಂತ ಮೇಲ್ಪಟ್ಟು ವಜ್ರ ಖರೀದಿ ಮಾಡಿದವರಿಗೆ ಸೆಲೆರಿಯೋ ಕಾರು ಗೆಲ್ಲುವ ಲಕ್ಕಿ ಕೂಪನ್ ನೀಡಲಾಗಿತ್ತು. ಇದರಲ್ಲಿ ಒಟ್ಟು 235 ರಷ್ಟು ಕೂಪನ್‌ಗಳು ಬಂದಿದ್ದು ಕಾರು ಡ್ರಾ ಕಾರ್ಯಕ್ರಮವನ್ನು ಫೆ. 24ರಂದು ಸಂಜೆ 4 ಗಂಟೆಗೆ ಮುಳಿಯ ಆಭರಣ ಮಳಿಗೆಯಲ್ಲಿ ಆಯೋಜನೆ ಮಾಡಿದ್ದು, ಇಕೋ ಪ್ರೆಸ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಹಾಗೂ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಉದ್ಘಾಟನೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು,”ಇವತ್ತು ಒಂದು ವಿಶೇಷ ಕಾರ್ಯಕ್ರಮದಲ್ಲಿ ನಾನು ಇರುವುದು ಬಹಳ ಖುಷಿ ಕೊಟ್ಟಿದೆ, ಹಿಂದೆ ಬೆಳ್ತಂಗಡಿ ಮಂದಿಗೆ ಇಲ್ಲಿ ಒಂದು ಸುಸಜ್ಜಿತ ಆಭರಣ ಮಳಿಗೆ ಇಲ್ಲ, ಆಭರಣ ಖರೀದಿಗೆ ಮಂಗಳೂರು ಕಡೆಗೆ ಹೋಗಬೇಕು ಅನ್ನುವ ಕೊರಗು ಇತ್ತು. ಆದರೆ 6 ವರ್ಷದಿಂದ ಮುಳಿಯ ಜುವೆಲ್ಲರ್ಸ್ ದೊಡ್ಡ ಶಾಖೆ ಮಾಡುವ ಮೂಲಕ ಬಹಳ ಒಳ್ಳೆಯ ಸೇವೆ ಕೊಡುತ್ತಿದೆ. ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ ಬಹಳ ಖುಷಿ ಕೊಡುತ್ತದೆ.

ಹೆಚ್ಚಿನ ಉದ್ಯಮಿಗಳು ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರುತ್ತಾರೆ.
ಆದರೆ ಮುಳಿಯ ಜುವೆಲ್ಲರ್ಸ್ ಉಳಿದ ಚಟುವಟಿಕೆಗಳಲ್ಲಿಯೂ ಕೊಡುಗೆ ಕೊಡುತ್ತಾ ಬಂದಿದೆ. ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುವ ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಪ್ರಾಸ್ತಾವಿಕ ಮಾತನ್ನಾಡಿದ ಮುಳಿಯ ಜುವೆಲ್ಲರ್ಸ್ ಮಾರ್ಕೆಟಿಂಗ್ ಕನ್ಸಲ್ವೆಂಟ್ ಆಗಿರುವ ವೇಣು ಗೋಪಾಲ ಶರ್ಮ, ಮುಳಿಯ ಜುವೆಲ್ಲರಿ ಸಮಾಜ ಜೊತೆ ಸೇರಿಕೊಂಡು ಅನೇಕ ಕೆಲಸ ಮಾಡಿಕೊಂಡು ಬರುತ್ತಿದೆ.

ಸಮಾಜ ಸೇವೆ ಅನ್ನುವುದು ಮುಳಿಯ ಫ್ಯಾಮಿಲಿಯ ಡಿಎನ್‌ ನಲ್ಲಿಯೇ ಇದೆ ಎಂದು ಹೇಳಿ ವಜ್ರ ಖರೀದಿ ಮಾಡಿದಾಗ ಸಿಗುವ ಆನಂದ ಹಾಗೂ ವಜ್ರದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಕ ರಾಕೇಶ್ ಹೆಗ್ಡೆ ಕಾರು ಡ್ರಾ ಕೂಪನ್ ಚೀಟಿ ಎತ್ತುವ ಮೂಲಕ ಕಾರು ಗೆದ್ದ ಅದೃಷ್ಟಶಾಲಿಯ ಸಂಖ್ಯೆಯನ್ನು ಘೋಷಿಸಿದರು. ಇನ್ ವಾಯ್ಸ್ ಸಂಖ್ಯೆ 4265ರ ಕೂಪನ್ ಸಂಖ್ಯೆ 00172ರ, ಶಿರ್ಲಾಲಿನ ಪ್ರಿಯಾಂಕ ಸೆಲೆರಿಯೋ ಕಾರು ಗೆದ್ದ ಅದೃಷ್ಟಶಾಲಿಯಾಗಿದ್ದಾರೆ.

ಇವರಿಗೆ ಫೆ. 25ರಂದು ಮುಳಿಯ ಆಭರಣ ಮಳಿಗೆಗೆ ಕರೆದು ಕಾರು ಕೀ ನೀಡಲಾಗುತ್ತದೆ ಎಂದು ಎಂ ಡಿ ವೇಣು ಗೋಪಾಲ ಶರ್ಮಾ ಹೇಳಿದ್ದಾರೆ.

ಬೆಳ್ತಂಗಡಿ ಮುಳಿಯ ಆಭರಣ ಮಳಿಗೆಯ ಕಾರ್ಯ ನಿರ್ವಾಹಕ ಸಹಾಯಕ ಶಿವಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರು ಡ್ರಾ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉದಯ್ ಕುಮಾರ್ ಲಾಯ್ ನಿರೂಪಣೆ ಮಾಡಿದರು. ಬೆಳ್ತಂಗಡಿ ಮುಳಿಯ ಜುವೆಲ್ಲರಿ ಮಳಿಗೆ ಮ್ಯಾನೇಜರ್ ಲೋಹಿತ್ ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು