Sat. Apr 19th, 2025

Chitradurga: ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳದ ಜೀವ ಉಳಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು!

ಚಿತ್ರದುರ್ಗ: (ಜು.24) ಪಾರಿವಾಳದ ಪ್ರಾಣ ಉಳಿಸಲು ಹೋಗಿ ಬಾಲಕ ವಿದ್ಯುತ್ ತಗುಲಿ ಸಾವನ್ನಪಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ಸಂತೆಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮಾಪುರದಲ್ಲಿ ನಡೆದಿದೆ.

ರಾಮಚಂದ್ರ (12ವ) ಎಂಬ ಬಾಲಕ ದುರ್ದೈವಿ. ಪಾರಿವಾಳ ವಿದ್ಯುತ್ ತಂತಿಯಲ್ಲಿ ತಗುಲಿ ಒದ್ದಾಡುತ್ತಿದ್ದನ್ನು ಕಂಡ ಬಾಲಕ ಪಾರಿವಾಳದ ಜೀವ ಉಳಿಸಬೇಕೆನ್ನುವ ಹಿನ್ನಲೆ ವಿದ್ಯುತ್ ತಂತಿಯ ಕಂಬ ಏರಿದ್ದಾನೆ.

ಪಾರಿವಾಳ ರಕ್ಷಣೆ ವೇಳೆ ವಿದ್ಯುತ್ ತಗುಳಿ ಸಾವನ್ನಪ್ಪಿದ್ದಾನೆ. ಮೃತ ರಾಮಚಂದ್ರ 6 ನೇ ತರಗತಿ ಕಲಿಯುತ್ತಿದ್ದಾನೆ ಎನ್ನಲಾಗಿದೆ. ಮಗನ ಶವ, ವಿದ್ಯುತ್ ಕಂಬದಲ್ಲಿ ನೇತಾಡುವುದನ್ನು ನೋಡಿದ ಪೋಷಕರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: https://uplustv.com/2024/07/24/belthangady-ಮಂಗಳೂರು-ಎಂ-ಐ-ಯು-ನಲ್ಲಿ-ಕ್ಯಾನ್ಸರ್-ರೋಗಿಗಳಿಗೆ-ನೇರ

ಈ ಸಂದರ್ಭದಲ್ಲಿ ಸ್ಥಳಕ್ಕೆ ರಾಮಪುರ ಠಾಣಾ ಎಸ್‌ಐ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಾಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಶಾಕ್‌ನಿಂದಾಗಿ ಬಾಲಕನ ಶವ ವಿದ್ಯುತ್ ಕಂಬದಲ್ಲಿನ ತಂತಿಗೆ ಸಿಲುಕಿ ನೇತಾಡುತ್ತಿದ್ದು, ಮಾನವೀಯತೆಯಿಂದ ಪಾರಿವಾಳದ ಜೀವ ಉಳಿಸಲು ಮುಂದಾಗಿದ್ದ ಬಾಲಕ ತನ್ನ ಜೀವವನ್ನೇ ಬಲಿ ನೀಡಿದ್ದಾನೆ.

ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ರಾಮಪುರ ಪಿಎಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *