ಉಜಿರೆ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ, ಬೆಳಾಲು ಇಲ್ಲಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರ ಶುಭಾಶೀರ್ವಾದಗಳೊಂದಿಗೆ, ರಂಗಭೂಮಿ ದಿಗ್ಗಜರಾದ ‘ರಂಗ್ ದ ರಾಜೆ’ ಲಯನ್ಸ್ ಸುಂದರ ರೈ ಮಂದಾರ ಅವರ ಮಾರ್ಗದರ್ಶನ ಹಾಗೂ ‘ಕುಸಲ್ದರಸೆ’ ನವೀನ್ ಡಿ. ಪಡೀಲ್ ಅವರ ಸಲಹೆ-ಸಹಕಾರದಲ್ಲಿ ಉಜಿರೆಯ ಪ್ರಸಿದ್ಧ ‘ಮಂದಾರ ಕಲಾವಿದರು’ ಅಭಿನಯಿಸುವ ಈ ವರ್ಷದ ಭಾವನಾತ್ಮಕ ತುಳು ಹಾಸ್ಯಮಯ ಕಲಾಕಾಣಿಕೆ ‘ಯೇರೆಡ ಪನೊಡು’ ನಾಟಕದ ಪ್ರಥಮ ಪ್ರದರ್ಶನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.


ಈ ಬಹುನಿರೀಕ್ಷಿತ ತುಳು ನಾಟಕದ ಉದ್ಘಾಟನಾ ಪ್ರದರ್ಶನವು ಆಗಸ್ಟ್ 15, 2025ರ ಶನಿವಾರ ಸಂಜೆ 6:30ಕ್ಕೆ ಉಜಿರೆಯ ಅನುಗ್ರಹ ಶಾಲೆಯ ಬಳಿ ಇರುವ ಅನುಗ್ರಹ ಆಡಿಟೋರಿಯಂನಲ್ಲಿ ವೈಭವದಿಂದ ನೆರವೇರಲಿದೆ.

ಕಥೆ, ಸಂಭಾಷಣೆ ಹಾಗೂ ಸಾರಥ್ಯ: ಗುಣಪಾಲ್ ಎಂ. ಎಸ್. ಉಜಿರೆ
ನಿರ್ದೇಶನ: ವಿ. ಎಸ್. ಶಶಿಧರ ದೇವಾಡಿಗ
ಸಂಚಾಲಕರು: ಪ್ರವೀಣ್ ಎನ್. ಉಜಿರೆ
ತಂಡದ ಸಮಗ್ರ ನಿರ್ವಹಣೆ: ಶ್ರೀಮತಿ ಚೇತನಾ ಗುಣಪಾಲ್ ಉಜಿರೆ
ಅಭಿನಯ: ಮಂದಾರ ಕಲಾವಿದರು, ಉಜಿರೆ


ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಭಾವನಾತ್ಮಕ ಹಾಗೂ ಮನರಂಜನಾತ್ಮಕ ಹಾಸ್ಯ ಕಥಾಹಂದರವನ್ನು ಹೊಂದಿರುವ ಈ ನಾಟಕವು ರಂಗಪ್ರಿಯರ ಮನ ಗೆಲ್ಲುವ ಭರವಸೆ ಮೂಡಿಸಿದೆ. ತುಳು ರಂಗಭೂಮಿ ಅಭಿಮಾನಿಗಳು ಹಾಗೂ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.






