ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.)ಗುರುವಾಯನಕೆರೆ ತಾಲೂಕು ವತಿಯಿಂದ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಅಂಡಿಂಜೆ ಶಾಲಾ ಆವರಣದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಹಣ್ಣಿನ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು sdmc ಅಧ್ಯಕ್ಷರು ರಮೇಶ್ ಬಂಗೇರ ವಹಿಸಿದರು
ಕಾರ್ಯಕ್ರಮವನ್ನು ಮಾನ್ಯ ಕೇಂದ್ರ ಕಛೇರಿ ಧರ್ಮಸ್ಥಳ ಕೃಷಿ ವಿಭಾಗ ದ ಯೋಜನಾಧಿಕಾರಿಗಳು ಬಾಲ ಕೃಷ್ಣ ಸರ್ ರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಅದರ ಭಾಗವಾಗಿ ಇಂದು ಶಾಲೆಯ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ಇದರಿಂದ ಪರಿಸರ ಹಸಿರೀಕರಣಗೊಳ್ಳುವುದರ ಜೊತೆಗೆ ಪ್ರಾಣಿ -ಪಕ್ಷಿಗಳಿಗೆ ಆಹಾರ ದೊರೆಯುತ್ತದೆ ಹಾಗೂ ಪರಿಸರದ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನಾಟಿ ಮಾಡಿ, ಅವುಗಳ ಪೋಷಣೆ ಮತ್ತು ಸಂರಕ್ಷಣೆ ಮಾಡುತ್ತಾ ಮರ-ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು.“ಈ ದೇಶದ ನೆಲ, ಜಲ, ನೈಸರ್ಗಿಕ ಸಂಪನ್ಮೂಲಗಳು, ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಎಂದು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುರೇಶ, ಹಾಗೂ ಪರಮೇಶ್ವರ, ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರ ಮೆನೇಜರ್ ಹರೀಶ್, ಕೃಷಿ ಮೇಲ್ವಿಚಾರಕರು ಕೃಷ್ಣ ಶಾಲೆ ಮುಖ್ಯ ಶಿಕ್ಷರು ಶ್ರೀ ಮತಿ ನಳಿನಿ ಅಂಡಿಂಜೆ B ಕಾರ್ಯಕ್ಷತ್ರದ ಅಧ್ಯಕ್ಷರು ಸುಲೋಚನಾ,, ಸಹ ಶಿಕ್ಷಕರು ಅಕ್ಷತಾ, ಶ್ಯಾಮಲಾ, ನಾಗರಾಜ್,ಕೇಶವ, ಸೇವಾಪ್ರತಿನಿಧಿ ಅಂದಿಂಜೆ B ಶ್ರೀ ಮತಿ ಸುಹಾಸಿನಿ ಶಾಲೆಯ ವಿದ್ಯಾರ್ಥಿಗಳು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.






